- Advertisement -
- Advertisement -



ವಿಟ್ಲ: ವಿಟ್ಲ-ಕೊಲ್ಯ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಬಿರುಕು ಬಿಟ್ಟಿದ್ದು, ಕುಸಿದು ಹೊಳೆ ಪಾಲಾಗುವ ಸಾಧ್ಯತೆ ಇದ್ದು, ಗ್ರಾಮಸ್ಥರು ಆತಂಕ ವ್ಯಕ್ತವಾಗಿದೆ.
ವಿಟ್ಲದಿಂದ ಕೊಲ್ಯ ಭಾಗಕ್ಕೆ ಸಂಪರ್ಕಿಸುವ ರಸ್ತೆಯ ಕಲ್ಲಕಟ್ಟ ಹೊಳೆಗೆ ಕಟ್ಟಲಾದ ತಡೆಗೋಡೆ ಬಿರುಕು ಬಿಟ್ಟಿದೆ. ಇದರಿಂದ ಕಲ್ಲಕಟ್ಟ-ಕೊಲ್ಯ ರಸ್ತೆ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ ಇದೆ. ಈ ರಸ್ತೆಯನ್ನು ಸುಮಾರು 16 ಮನೆಯವರು ಪ್ರಯೋಜನ ಪಡೆಯುತ್ತಿದ್ದು, ರಸ್ತೆ ಕುಸಿದರೆ ಸಂಪರ್ಕ ಕಡಿತಗೊಳ್ಳುವ ಆತಂಕ ಎದುರಾಗಿದೆ.
- Advertisement -