- Advertisement -
- Advertisement -



ಬಂಟ್ವಾಳ: ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣಾದ ಘಟನೆ ಮಂಚಿಯಲ್ಲಿ ನಡೆದಿದೆ.
ಆತ್ಮಹತ್ಯೆ ಶರಣಾದ ಮಹಿಳೆಯನ್ನು ಭಾರತಿ ( 48) ಎಂದು ಗುರುತಿಸಲಾಗಿದೆ.
ಮಂಚಿ ಗ್ರಾಮದ ಮನೆವಾರ್ತೆ ನಿವಾಸಿ ವಿಠಲ ಪೂಜಾರಿ ಹಾಗೂ ಭಾರತಿಯವರಿಗೆ ಮದುವೆ ಆಗಿ 22 ವರ್ಷ ಕಳೆದರೂ ಮಕ್ಕಳಾಗಿಲ್ಲ , ಇದೇ ಕಾರಣದಿಂದ ಸುಮಾರು 15 ವರ್ಷಗಳಿಂದ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ..
ಬಳಿಕ ನಿರಂತರವಾಗಿ ಔಷಧಿಯನ್ನು ಸೇವಿಸುತ್ತಿದ್ದ ಇವರಿಗೆ ಇತ್ತೀಚೆಗೆ 3 ವರ್ಷಗಳಿಂದ ಖಾಯಿಲೆ ಜಾಸ್ತಿಯಾಗಿ ಜೀವನದಲ್ಲಿ ಜಿಗುಪ್ಸೆ ಗೊಂಡಿದ್ದರು ಎನ್ನಲಾಗಿದೆ.
- Advertisement -