Monday, June 30, 2025
spot_imgspot_img
spot_imgspot_img

ಕಾರ್ಕಳ: ಗ್ರಾಹಕನ ಸೋಗಿನಲ್ಲಿ ಬಂದು ಚಿನ್ನದ ಸರ ಎಗರಿಸಿದ ಖದೀಮ

- Advertisement -
- Advertisement -

ಕಾರ್ಕಳ: ಗ್ರಾಹಕನ ಸೋಗಿನಲ್ಲಿ ಬಂದ ಖದೀಮ ನಗುನಗುತ್ತಾ ಮಾತನಾಡಿ ಚಿನ್ನದ ಸರ ಎಗರಿಸಿದ ಘಟನೆ ಕಾರ್ಕಳದ ಜ್ಯುವೆಲ್ಲರಿ ಅಂಗಡಿಯೊಂದರಲ್ಲಿ ನಡೆದಿದೆ.

ಸೆ.೧೧ರಂದು ಮಧ್ಯಾಹ್ನ ಅಪರಿಚಿತ ವ್ಯಕ್ತಿಯೊಬ್ಬರು ಚಿನ್ನದ ಸರವನ್ನು ಕದೊಯ್ದಿದ್ದಾನೆ. ಕಾರ್ಕಳ ಕಸಬಾ ಗ್ರಾಮದ ಮೂರು ಮಾರ್ಗ ಜಂಕ್ಷನ್ ಬಳಿಯಿರುವ ಕುಕ್ಕುಂದೂರು ಗ್ರಾಮದ ಅಮಿತ್ ಮಾಲೀಕತ್ವದ ಅಂಗಡಿಗೆ ಆಗಮಿಸಿದ ವ್ಯಕ್ತಿ, ಚಿನ್ನದ ಮಣಿಗಳಿಂದ ಕೂಡಿದ ಸರವನ್ನು ತೋರಿಸಲು ಸಿಬ್ಬಂದಿಯನ್ನು ಕೇಳಿದ್ದಾನೆ. ನಂತರ ನಗು ನಗುತ್ತಲ್ಲೆ ಮಾತಾನಾಡಿ, ಕೆಲವೆ ನಿಮಿಷದಲ್ಲಿ ಚಿನ್ನದ ಚೈನ್ ಎತ್ತಿಕೊಂಡು ಎಸ್ಕೇಪ್ ಆಗಿದ್ದಾನೆ.

ಕಳ್ಳತನವಾದ ನಂತರ ಅಂಗಡಿ ಮಾಲೀಕರು ದೂರು ನೀಡಿದ್ದು, ಕಾರ್ಕಳ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಯನ್ನು ಗುರುತಿಸಿ ಬಂಧಿಸಲು ತನಿಖೆ ಮುಂದುವರಿದಿದೆ.ಕಳ್ಳತನದ ದೃಶ್ಯ ಅಂಗಡಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

- Advertisement -

Related news

error: Content is protected !!