Saturday, June 28, 2025
spot_imgspot_img
spot_imgspot_img

ಅಳಿಕೆ : (ಅ. 06) ಮಡಿಯಾಲ ಶ್ರೀ ಗೋಪಾಲಕೃಷ್ಣ ದೇವಸ್ಥಾನ, ಅಳಿಕೆ ಗರ್ಭಗುಡಿ ಮತ್ತು ನಮಸ್ಕಾರ ಮಂಟಪ ನಿರ್ಮಾಣದ ದಿವ್ಯ ಶಿಲಾ ಸ್ವಾಗತ ಕಾರ್ಯಕ್ರಮ

- Advertisement -
- Advertisement -

ಅಳಿಕೆ : ಅಳಿಕೆ ಗ್ರಾಮದ ಮಡಿಯಾಲ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಜೀರ್ಣೋದ್ದಾರ ಸಂಬಂಧವಾಗಿ ಗರ್ಭಗುಡಿ ಮತ್ತು ನಮಸ್ಕಾರ ಮಂಟಪ ನಿರ್ಮಾಣದ ದಿವ್ಯ ಶಿಲಾ ಸ್ವಾಗತ ಕಾರ್ಯಕ್ರಮವು ದಿನಾಂಕ 06-10-2024ನೇ ರವಿವಾರ ನಡೆಯಲಿದೆ.

ತಾರೀಕು 06-10-2024ನೇ ರವಿವಾರ ಪೂರ್ವಾಹ್ನ ಗಂಟೆ 8-00ಕ್ಕೆ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಬಂಗಾರು ಅರಸರು, ವಿಟ್ಲ ಅರಮನೆ ವಾಹನ ಜಾಥಾಕ್ಕೆ ಚಾಲನೆಯನ್ನು ನೀಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ನಿತ್ಯಾನಂದ ನಾಯಕ್, ಸಮಾಜಸೇವಕರು, ಸದಸ್ಯರು, ವಿಠಲ ವಿದ್ಯಾವರ್ಧಕ ಸಂಘ, ವಿಟ್ಲ ಜಗನ್ನಾಥ ಸಾಲಿಯಾನ್, ಸದಸ್ಯರು, ಆಡಳಿತ ಸಮಿತಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ, ವಿಟ್ಲ ಕರುಣಾಕರ ಗೌಡ ನಾಯ್ತೋಟ್, ಅಧ್ಯಕ್ಷರು, ವಿಟ್ಲ ಪಟ್ಟಣ ಪಂಚಾಯತು, ವಿಟ್ಲ ನಾಗರಾಜ, ಆರಕ್ಷಕ ನಿರೀಕ್ಷಕರು ವಿಟ್ಲ ಆರಕ್ಷಕ ಠಾಣೆ, ವಿಟ್ಲ ಇವರು ಭಾಗವಹಿಸಲಿದ್ದಾರೆ.
ಎಸ್. ಚಂದ್ರಶೇಖರ ಭಟ್, ಅಧ್ಯಕ್ಷರು, ಜೀರ್ಣೋದ್ಧಾರ ಸಮಿತಿ, ಶ್ರೀ ಗೋಪಾಲಕೃಷ್ಣ ದೇವಸ್ಥಾನ ಮಡಿಯಾಲ , ಕಾನ ಈಶ್ವರ ಭಟ್, ಸಂಚಾಲಕರು, ಜೀರ್ಣೋದ್ಧಾರ ಸಮಿತಿ, ಶ್ರೀ ಗೋಪಾಲಕೃಷ್ಣ ದೇವಸ್ಥಾನ ಮಡಿಯಾಲ ಇವರುಗಳ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ.

ಪೂರ್ವಾಹ್ನ ಗಂಟೆ 9-00ಕ್ಕೆ ಪಡಿಬಾಗಿಲು ಸಂಗಮ ಯುವಕ ಮಂಡಲದ ಮುಂಭಾಗ ಸಾಂಸ್ಕೃತಿಕ ಕಲಾ ತಂಡಗಳೊಂದಿಗೆ ವೈಭವೋಪೇತ ದಿವ್ಯ ಶಿಲಾ ಮೆರವಣಿಗೆಯ ಉದ್ಘಾಟನೆಯನ್ನು ಮಲ್ಲಿಕಾ ಪ್ರಶಾಂತ್ ಪಕ್ಕಳ, ಮಲಾರಬೀಡು ಸದಸ್ಯರು, ರಾಜ್ಯ ಧಾರ್ಮಿಕ ಪರಿಷತ್, ಕರ್ನಾಟಕ ಸರಕಾರ ಇವರು ಮಾಡಲಿದ್ದಾರೆ.
ಸಾಂಸ್ಕೃತಿಕ ಮೆರವಣಿಗೆಗೆ ಚಾಲನೆಯನ್ನು ಪ್ರಭಾಕರ ಶೆಟ್ಟಿ. ದಂಬೆಕಾನ, ಕಾರ್ಯಾಧ್ಯಕ್ಷರು, ಅಭಿವೃದ್ಧಿ ಸಮಿತಿ, ಶ್ರೀ ಶಂಕರನಾರಾಯಣ ದೇವಸ್ಥಾನ, ಎರುಂಬು ನೀಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ರಾಘವ ಮಣಿಯಾಣಿ ಸಾರಡ್ಕ, ಅಧ್ಯಕ್ಷರು ಕೇಪು ಗ್ರಾಮ ಪಂಚಾಯತು ಶ್ರೀ ಸನತ್ ಕುಮಾರ ಬಿ., ಅಧ್ಯಕ್ಷರು, ಸಂಗಮ ಯುವಕ ಮಂಡಲ, ಪಡಿಬಾಗಿಲು ಭಾಗವಹಿಸಲಿದ್ದಾರೆ.
ಗಿರೀಶ್ ಆಚಾರ್ಯ ಮೂವಾಜೆ, ಅಧ್ಯಕ್ಷರು ವಿಶ್ವಬ್ರಾಹ್ಮಣ ಸೇವಾ ಸಂಘ, ಪಡಿಬಾಗಿಲು , ಮಹೇಶ ಮಡಿಯಾಲ, ಗೌರವಾಧ್ಯಕ್ಷರು, ಜೀರ್ಣೋದ್ಧಾರ ಸಮಿತಿ, ಶ್ರೀ ಮಡಿಯಾಲ ಗೋಪಾಲಕೃಷ್ಣ ದೇವಸ್ಥಾನ ಇವರುಗಳ ಉಪಸ್ಥಿತಿಯಲ್ಲಿ ನಡೆಯಲಿದೆ. ಮೆರವಣಿಗೆಯಲ್ಲಿ ಹಲವು ಕಲಾ ತಂಡಗಳು ಪಾಲ್ಗೊಳ್ಳಲಿದೆ.

ಮಧ್ಯಾಹ್ನ ಗಂಟೆ 11-00ಕ್ಕೆ ಮಡಿಯಾಲ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಶಿಲಾ ಸ್ವಾಗತ ಮತ್ತು ಮೆರವಣಿಗೆಯು ಸಂಪನ್ನಗೊಳ್ಳಲಿದೆ.
ಶ್ರೀ ದೇವರಿಗೆ ವಿಶೇಷ ಪೂಜೆ, ಮಹಾಮಂಗಳಾರತಿ ನಂತರ ಪ್ರಸಾದ ವಿತರಣೆ, ಲಘು ಉಪಾಹಾರ ಜರಗಳಿದೆ.

ಮಧ್ಯಾಹ್ನ ಗಂಟೆ 12-00ರಿಂದ ಮಡಿಯಾಲ ಶ್ರೀ ಗೋಪಾಲಕೃಷ್ಣ ಸಭಾಂಗಣದಲ್ಲಿ ಸಭಾ ಕಾರ್ಯಕ್ರಮವು ಜರಗಳಿದೆ. ಈ ಸಭಾ ಕಾರ್ಯಕ್ರಮದಲ್ಲಿ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಶ್ರೀ ಗುರುದೇವ ದತ್ತ ಸಂಸ್ಥಾನಂ, ಒಡಿಯೂರು ಇವರು ಆಶೀರ್ವಚನ ನೀಡಲಿದ್ದಾರೆ.

ಕೆ. ಎಸ್. ಕೃಷ್ಣ ಭಟ್ ಗೌರವಾಧ್ಯಕ್ಷರು, ಜೀರ್ಣೋದ್ಧಾರ ಸಮಿತಿ, ಶ್ರೀ ಗೋಪಾಲಕೃಷ್ಣ ದೇವಸ್ಥಾನ ಇವರ ಅಧ್ಯಕ್ಷತೆಯಲ್ಲಿ ಜರಗುವ ಈ ಕಾರ್ಯಕ್ರಮದಲ್ಲಿ ರಮೇಶ್ ಯೋಜನಾಧಿಕಾರಿಗಳು, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ವಿಟ್ಲ ವಲಯ , ಸಂಕಪ್ಪ ಶೇಕ, ಅಧ್ಯಕ್ಷರು, ಆಡಳಿತ ಸಮಿತಿ ಶ್ರೀ ಶಂಕರನಾರಾಯಣ ದೇವಸ್ಥಾನ, ಎರುಂಬು ಡಾ|| ಸಿ. ಕುಶಾಲಪ್ಪ ಗೌಡ, ಅಧ್ಯಕ್ಷರು ಬಂಟ್ವಾಳ ತಾಲೂಕು ಗೌಡರ ಯಾನೇ ಒಕ್ಕಲಿಗರ ಸಂಘ , ವಿಷ್ಣು ರಾವ್ ಮಡಿಯಾಲ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ನುಧ್ಯಾಹ್ನ ಸಭಾ ಕಾರ್ಯಕ್ರನು ಬಳಿಕ ಪ್ರಸಾದ ಭೋಜನ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!