Sunday, June 29, 2025
spot_imgspot_img
spot_imgspot_img

ಪುತ್ತೂರು: ವಿಜಯಸಾಮ್ರಾಟ್ ನೇತೃತ್ವದ ಪುತ್ತೂರುದ ಪಿಲಿಗೊಬ್ಬು ಸೀಸನ್ 2 ಉದ್ಘಾಟನಾ ಕಾರ್ಯಕ್ರಮ

- Advertisement -
- Advertisement -

ಪುತ್ತೂರು: ವಿಜಯಸಾಮ್ರಾಟ್ ನೇತೃತ್ವದ ಪುತ್ತೂರುದ ಪಿಲಿಗೊಬ್ಬು ಸಂಘಟನೆಯ ಸ್ಥಾಪಕಾಧ್ಯಕ್ಷ ಸಹಜ್ ರೈ ಬಳಜ್ಜ ಸಾರಥ್ಯದಲ್ಲಿ ಪ್ರಥಮ ಪ್ರದರ್ಶನದಲ್ಲೇ ಎಲ್ಲೆಡೆ ಸದ್ದು ಮಾಡಿದ ಪಿಲಿಗೊಬ್ಬು ಸೀಸನ್ 2 ಕಾರ್ಯಕ್ರಮ ಉದ್ಘಾಟನಾ ಸಮಾರಂಭ ನಡೆಯಿತು.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯರು ಸುನೀಲ್‌ ಆಚಾರ್ಯ ಇವರ ಅಧ್ಯಕ್ಷತೆಯಲ್ಲಿ ನಡೆದ ಉದ್ಘಾಟನಾ ಕಾರ್ಯಕ್ರಮವನ್ನು ಮಂಗಳೂರು ಲೋಕಸಭಾ ಕ್ಷೇತ್ರದ ಮಾಜಿ ಸಂಸದ ನಳಿನ್‌ ಕುಮಾರ್‌ ಕಟೀಲ್‌ ದೀಪ ಬೆಳಗಿಸಿ ಉದ್ಘಾಟಿಸಿ ಬಳಿಕ ಶುಭ ಹಾರೈಸಿದರು.

ಉದ್ಘಾಟನಾ ಕಾರ್ಯಕ್ರಮದಲ್ಲಿ ಕತಾರ್‌ ಕರ್ನಾಟಕ ಸಂಘದ ಅಧ್ಯಕ್ಷರು,ಮೂಡಂಬೈಲು ರವಿ ಶೆಟ್ಟಿ, ಸಂಜೀವ ಮಠಂದೂರು, ಮಾಜಿ ಶಾಸಕರು ಪುತ್ತೂರು, ಮಂಗಳೂರು ಡಿಸಿಸಿ ಬ್ಯಾಂಕ್‌ ನಿರ್ದೇಶಕರು ಶಶಿಕುಮಾರ್‌ ರೈ ಬಾಲ್ಯೊಟ್ಟು, ಜಿ ಎಲ್ ಆಚಾರ್ಯ ಜ್ಯುವೆಲ್ಲರಿ, ಸಂಸ್ಥೆಯ ಮಾಲಕರು ಬಲರಾಮ ಆಚಾರ್ಯ, ಸಹಸ್ರಲಿಂಗೇಶ್ವರ ದೇವಸ್ಥಾನದ ಮಾಜಿ ಅಧ್ಯಕ್ಷರು ಕರ್ನಾಟಕ ಸುವರ್ಣ, ಕಿರಣ್‌ ಬಿ ಎಂ, ಪುತ್ತೂರು ನಗರ ಠಾಣಾ ಇನ್‌ಸ್ಟೆಕ್ಟರ್‌ , ಬ್ರೈಟ್‌ ವೇ ಕಂಪೆನಿ ಆಡಳಿತ ನಿರ್ದೇಶಕರು ಹರ್ಷ ಕುಮಾರ್‌ ರೈ, ನಗರ ಸಭಾ ಸದಸ್ಯರು ರಮೇಶ್‌ ರೈ ಮೊಟ್ಟೆತ್ತಡ್ಕ, ಮುಳಿಯ ಜ್ಯುವೆಲ್ಲರಿ ಸಂಸ್ಥೆಯ ಮಾಲಕರು, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಿಕಟಪೂರ್ವ ಸಮಿತಿ ಅಧ್ಯಕ್ಷರು ಮುಳಿಯ ಕೇಶವ ಪ್ರಸಾದ್‌, ಕರಾವಳಿ ಪ್ರಾಧಿಕಾರದ ಮಾಜಿ ಅಧ್ಯಕ್ಷರು ಚನಿಲ ತಿಮ್ಮಪ್ಪ ಶೆಟ್ಟಿ, ನಗರ ಸಭಾ ಮಾಜಿ ಅಧ್ಯಕ್ಷರು ಜೀವಂಧರ ಜೈನ್‌, ಪ್ರಗತಿ ಪರ ಕೃಷಿಕ ದಯಾಕರ ಆಳ್ವ, ಎ ಕೆ ಜಯರಾಮ ರೈ, ಮಾಜಿ ಪುರಸಭೆ ಅಧ್ಯಕ್ಷರು ರಾಜೇಶ್‌ ಬನ್ನೂರು, ನಗರ ಸಭಾ ಸದಸ್ಯ, ಪೂಡ ಮಾಜಿ ಅಧ್ಯಕ್ಷರು ಅಶೋಕ್‌ ಶೆಣೈ, ತಾಲೂಕು ಪಂಚಾಯತ್‌ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷರು ಸಾಜ ರಾಧಕೃಷ್ಣ ಆಳ್ವ, ಕೆಎಂಎಫ್‌ ಉಪಾಧ್ಯಕ್ಷರು, ಡಿಸಿಸಿ ಬ್ಯಾಂಕ್‌ ನಿರ್ದೇಶಕರು ಎಸ್‌ಪಿ ಜಯರಾಮ್ ರೈ, ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷರು ಉಮೇಶ್‌ ನಾಯ್ಕ್‌, ಸುಧೀರ್‍ ರೈ, ಸುಜಿತ್‌ ರೈ ಸೇರಿದಂತೆ ಹಲವು ಗಣ್ಯರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

ಪುತ್ತೂರುದ ಪಿಲಿಗೊಬ್ಬು ಸೀಸನ್ 2 ಕಾರ್ಯಕ್ರಮದಲ್ಲಿ 50ಕ್ಕೂ ಅಧಿಕ ಆಹಾರ ಮಳಿಗೆಗಳನ್ನೊಳಗೊಂಡ ಫುಡ್ ಫೆಸ್ಟ್‌ಗೆ ನಿನ್ನೆ ಚಾಲನೆ ನೀಡಲಾಗಿದ್ದು, ಫುಡ್ ಫೆಸ್ಟ್‌ ನಲ್ಲಿ ಕರಾವಳಿಯ ರುಚಿಕರ ಖಾದ್ಯಗಳ ಸಹಿತ ರಾಜ್ಯದ ವಿವಿಧ ಭಾಗಗಳಿಂದ ಬಂದಿರುವ ಐವತ್ತು ವಿವಿಧ ಖಾದ್ಯಗಳ ಮಳಿಗೆಗಳು ವಿಜೃಂಭಿಸಲಿದೆ. ಆಹಾರ ಮಳಿಗೆಗಳ ಮಾಲಕರಿಗೆ ಸ್ವಚ್ಛತೆಗೆ ಆದ್ಯತೆಯ ಜೊತೆಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ವಿಶೇಷ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಪ್ರಥಮ ಬಹುಮಾನ 5,000, ದ್ವಿತೀಯ ಬಹುಮಾನ 3000, ತೃತೀಯ ಬಹುಮಾನ 2000 ಜೊತೆಗೆ ಪ್ರಮಾಣ ಪತ್ರವನ್ನು ನೀಡಿ ಗೌರವಿಸಲಾಗುವುದು ಎಂದು ಪಿಲಿಗೊಬ್ಬು ಸಂಘಟನೆಯ ಸ್ಥಾಪಕಾಧ್ಯಕ್ಷ ಸಹಜ್ ರೈ ಬಳಜ್ಜ ತಿಳಿಸಿದರು.

- Advertisement -

Related news

error: Content is protected !!