- Advertisement -
- Advertisement -





ಕಡಬ: ಅಡಿಕೆ ತುಂಬಿದ್ದ ಗೋಣಿ ಚೀಲ ಕದ್ದೊಯ್ಯುತ್ತಿದ್ದ ಇಬ್ಬರನ್ನು ಹಿಡಿದು ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ ಘಟನೆ ಕಡಬ ಠಾಣಾ ವ್ಯಾಪ್ತಿಯ ಕೋಡಿಂಬಾಳ ಗ್ರಾಮದ ಕೋರಿಯರ್ನಲ್ಲಿ ನಡೆದಿದೆ.
ಕೋರಿಯರ್ ಕೆರ್ಮಾಯಿ ಸಮೀಪದ ತೋಟವೊಂದರಿಂದ ಸ್ಥಳೀಯ ವ್ಯಕ್ತಿಗಳು ಎನ್ನಲಾದ ಇಬ್ಬರು ಅಡಿಕೆ ಕದ್ದೊಯ್ಯುತ್ತಿದ್ದ ವೇಳೆ ಸ್ಥಳೀಯರು ಪತ್ತೆ ಹಚ್ಚಿದ್ದಾರೆ.
ಸ್ಥಳೀಯರು ಇಬ್ಬರಿಗೂ ಥಳಿಸಿ ನಂತರ ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ತಿಳಿದು ಬಂದಿದೆ. ಇಬ್ಬರನ್ನೂ ಠಾಣೆಗೆ
ಕರೆದೊಯ್ಯಲಾಗಿದ್ದು ನಂತರದ ಬೆಳವಣಿಗೆಯಲ್ಲಿ ಮುಚ್ಚಳಿಕೆ ಬರೆಸಿ ಎಚ್ಚರಿಕೆ ನೀಡಿ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.
- Advertisement -