- Advertisement -
- Advertisement -
ಬೆಳ್ತಂಗಡಿ(ನ.3): ವೇಣೂರು ಠಾಣಾ ವ್ಯಾಪ್ತಿಯ ಕೊಕ್ರಾಡಿ ಜಂತಿಗೊಳಿಯಲ್ಲಿ ಮಗು ಸಹಿತ ದಂಪತಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.ಗೆದ್ದಲು ನಾಶಕ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಚೇತನ್ (35) ಆಶಾಲತ (32 ) ಮಗು ಕಿಶಾನ (5) ಮೂವರ ಸ್ಥಿತಿಯು ಗಂಭೀರವಾಗಿದ್ದು ಈ ಮೂವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಈ ದಂಪತಿಗಳು ಮಗುವಿಗೆ ಫಾಂಟಾ ಜ್ಯೂಸ್ ನಲ್ಲಿ ವಿಷ ನೀಡಿ , ಡೆತ್ ನೋಟ್ ನಲ್ಲಿ “ನಮ್ಮ ಸಾವಿಗೆ ನಾವೇ ಕಾರಣ“ವೆಂದು ಬರೆದಿಟ್ಟು ,ಮನೆಯಬಾಗಿಲನ್ನು ಭದ್ರ ಪಡಿಸಿ ತಾವು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ.ಬಾಗಿಲು ಒಡೆದು ಮೂವರನ್ನು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗುತ್ತಿದೆ.ಮೂವರ ಸ್ಥಿತಿಯು ಗಂಭೀರವಾಗಿದೆ ಎಂದು ತಿಳಿದು ಬಂದಿದೆ.
- Advertisement -