Sunday, June 29, 2025
spot_imgspot_img
spot_imgspot_img

ಪಾಕ್ ವಶದಲ್ಲಿದ್ದ 7 ಭಾರತೀಯ ಮೀನುಗಾರರನ್ನು ರಕ್ಷಿಸಿದ ಕರಾವಳಿ ಕಾವಲು ಪಡೆ

- Advertisement -
- Advertisement -

ಗಾಂಧಿನಗರ: ಭಾರತ – ಪಾಕಿಸ್ತಾನ ಸಮುದ್ರ ಗಡಿಯ ಮಧ್ಯೆ ಪಾಕಿಸ್ತಾನ ಕರಾವಳಿ ಭದ್ರತಾ ಏಜೆನ್ಸಿ ವಶದಲ್ಲಿದ್ದ ಏಳು ಭಾರತೀಯ ಮೀನುಗಾರರನ್ನು ಗುಜರಾತ್ ಕರಾವಳಿ ಕಾವಲು ಪಡೆ ರಕ್ಷಿಸಿದೆ.

ಭಾರತೀಯ ಮೀನುಗಾರರ ದೋಣಿಯೊಂದು ಮೀನುಗಾರಿಕೆ ರಹಿತ ಪ್ರದೇಶದಲ್ಲಿ ಇರುವುದನ್ನು ಕಂಡ ಕರಾವಳಿ ಕಾವಲು ಪಡೆ ಏನೋ ಸಮಸ್ಯೆಯಾಗಿರುವಾಗಿ ತಿಳಿಸಿದ್ದಾರೆ. ಬಳಿಕ ಅವರನ್ನು ರಕ್ಷಿಸಿದ್ದಾರೆ. ಮೀನುಗಾರರನ್ನು ಉಭಯ ದೇಶಗಳ ನಡುವಿನ ಸಮುದದ್ರ ಗಡಿಯ ಬಳಿ ಅವರ ಹಡಗಿನಲ್ಲಿ ಇರಿಸಲಾಗಿತ್ತು ಎಂದು ಭಾರತೀಯ ಕರಾವಳಿ ಕಾವಲು ಪಡೆ (IGC) ತಿಳಿಸಿದೆ.

ಸೋಮವಾರ ಮಧ್ಯಾಹ್ನ 3:30ರ ಸುಮಾರಿಗೆ ಮೀನುಗಾರಿಕೆ ರಹಿತ ಪ್ರದೇಶದಲ್ಲಿ ಭಾರತೀಯ ಮೀನುಗಾರರ ದೋಣಿ ಕಂಡಿದ್ದು, ಬಳಿಕ ಇನ್ನೊಂದು ದೋಣಿ `ಕಾಲ್ ಭೈರವ್’ ಅನ್ನು ಪಾಕಿಸ್ತಾನ ಕಡಲ ಭದ್ರತಾ ಸಂಸ್ಥೆ ತಡೆಹಿಡಿದಿದೆ. ಜೊತೆಗೆ ಆ ಹಡಗಿನಲ್ಲಿ 7 ಮೀನುಗಾರರು ಇರುವುದಾಗಿ ತಿಳಿದುಬಂದಿದೆ. ಕೂಡಲೇ ಕಾವಲು ಪಡೆ ಕಾರ್ಯ ಆರಂಭಿಸಿ, ಭಾರತ – ಪಾಕಿಸ್ತಾನ ಸಮುದ್ರ ಗಡಿ ಬಳಿ ತಲುಪಿದ್ದು, ಮೀನುಗಾರರನ್ನು ರಕ್ಷಿಸಿದ್ದಾರೆ.

ಏಳು ಮೀನುಗಾರರನ್ನು ಪಾಕಿಸ್ತಾನದ ಹಡಗಿನಿಂದ ಸುರಕ್ಷಿತವಾಗಿ ಹೊರತೆಗೆದಿದ್ದು, ಆರೋಗ್ಯವಾಗಿದ್ದಾರೆ. ಈ ಘಟನೆ ಭಾರತೀಯ ದೋಣಿ ಕಾಲ್ ಭೈರವ್ ಹಾನಿಗೊಳಗಾಗಿದ್ದು, ಮುಳುಗಿದೆ ಎಂದು ತಿಳಿಸಿದೆ.

- Advertisement -

Related news

error: Content is protected !!