- Advertisement -
- Advertisement -



ಮಂಗಳೂರು: ‘ಅಶ್ವಮೇಧ’ ಬಸ್ನ ಗಾಜಿಗೆ ಹೆಲ್ಮೆಟ್ ನಿಂದ ಬಡಿದು ಹಾನಿಯನ್ನುಂಟು ಮಾಡಿರುವ ಘಟನೆ ನಗರದ ಅಳಪೆ ಎಂಬಲ್ಲಿ ರವಿವಾರ ಸಂಜೆ ನಡೆದಿರುವುದು ವರದಿಯಾಗಿದೆ.
ದ್ವಿಚಕ್ರ ವಾಹನ ಅಡ್ಡ ಬಂದಿರುವ ವಿಚಾರವನ್ನು ಪ್ರಶ್ನಿಸಿದಕ್ಕಾಗಿ ಕೋಪಗೊಂಡ ಬೈಕ್ ಸವಾರ ಈ ಕೃತ್ಯ ಎಸಗಿದ್ದಾನೆ.ಮಂಗಳೂರಿನಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದ ಬಸ್ಗೆ ಅಳಪೆ ಬಳಿ ದ್ವಿಚಕ್ರ ವಾಹನ ಅಡ್ಡ ಬಂದಾಗ ಬಸ್ನ ಚಾಲಕ ಇದನ್ನು ಪ್ರಶ್ನಿಸಿದ ಎನ್ನಲಾಗಿದೆ. ಈ ವೇಳೆ ಸಿಟ್ಟಿನಿಂದ ದ್ವಿಚಕ್ರ ವಾಹನ ಸವಾರ ಬಸ್ನ ಗಾಜಿಗೆ ಹೆಲ್ಕೆಟ್ನಿಂದ ಬಡಿದು ಪರಾರಿಯಾಗಿರುವುದಾಗಿ ತಿಳಿದು ಬಂದಿದೆ. ಬಸ್ ಚಾಲಕ ಅರುಣ್ ಎಂಬವರ ಕೈಗೆ ಗಾಯವಾಗಿದೆ ಎಂದು ತಿಳಿದು ಬಂದಿದೆ.
- Advertisement -