Sunday, June 29, 2025
spot_imgspot_img
spot_imgspot_img

ಕಬಕ: ಕ್ಷುಲ್ಲಕ ವಿಚಾರಕ್ಕೆ ಕೆಎಸ್‌ಆರ್‌‌ಟಿಸಿ ಸಿಬ್ಬಂದಿಗಳ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ..!

- Advertisement -
- Advertisement -

ಕಬಕ: ಕ್ಷುಲ್ಲಕ ವಿಚಾರಕ್ಕೆ ಕೆಎಸ್‌ಆರ್‌‌ಟಿಸಿ ಸಿಬ್ಬಂದಿಗಳ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ ಘಟನೆ ಕಬಕದಲ್ಲಿ ನಡೆದಿದೆ.

ಕ್ಷುಲ್ಲಕ ವಿಚಾರದಿಂದ ಕಬಕದಿಂದ ಹಿಂಬಾಲಿಸಿ ಬಂದು ಉರಿಮಜಲು ಬಳಿ ಕಬಕ-ವಿಟ್ಲ ರಸ್ತೆಯಲ್ಲಿನ B.K.ಹಾರ್ಡ್ ವೇರ್ ಅಂಗಡಿಯೊಂದರ ಮಾಲಿಕನಿಗೆ ಸೇರಿದ ಪಿಕಪ್ ವಾಹನದಲ್ಲಿ ತಡೆದು ಪುತ್ತೂರು-ವಿಟ್ಲ ಮಧ್ಯೆ ಸಂಚರಿಸುವ ಕೆಎಸ್‌ಆರ್‌‌ಟಿಸಿ ಚಾಲಕ-ನಿರ್ವಾಹಕನ ಮೇಲೆ ದುಷ್ಕರ್ಮಿಗಳಿಂದ ದಾಳಿ ನಡೆಸಿ ಪ್ರಯಾಣಿಕರ ಮುಂದೆಯೇ ಬಸ್ ಸಿಬ್ಬಂದಿಗಳ ಮೇಲೆ ಹಲ್ಲೆ ಮಾಡಿ ಜೀವಬೆದರಿಕೆ ಹಾಕಿದ್ದಾರೆ. ಪಿಕಪ್ ವಾಹನದಲ್ಲಿ ಹಲ್ಲೆ ಮಾಡಿ ಆರೋಪಿಗಳು ಪರಾರಿಯಾಗಿದ್ದಾರೆ.

ಕೆಎಸ್‌ಆರ್‌‌ಟಿಸಿ ಬಸ್‌ ಸೈಡ್‌‌ ಕೊಡಲಿಲ್ಲ ಎಂಬ ವಿಚಾರಕ್ಕೆ ಬಸ್ ಅಡ್ಡಗಟ್ಟಿ ಡ್ರೈವರ್‌ಗೆ ಹಲ್ಲೆ ಮಾಡಿದ್ದಾರೆ. ಬಸ್ ಕಂಡಕ್ಟರ್‌ಗೆ ಹಲ್ಲೆ ಮಾಡುವುದನ್ನು ವೀಡಿಯೋ ಮಾಡಿದಾಗ ಶಬರಿಮಲೆ ಮಾಲೆ ಹಾಕಿದ ಸ್ವಾಮಿಗೂ ಹಲ್ಲೆ ಮಾಡಿದ್ದಾರೆ ಎಂದು ಸಾರ್ವಜನಿಕರಿಂದ ತಿಳಿದು ಬಂದಿದೆ.

ಪಿಕಪ್ ವಾಹನ ಮತ್ತು ಹಲ್ಲೆಗೈದ ದುರ್ಷರ್ಮಿಗಳನ್ನು ಬಂಧಿಸುವಂತೆ ಪ್ರಯಾಣಿಕರು ಒತ್ತಾಯಿಸಿದ್ದಾರೆ. ಘಟನಾ ಸ್ಥಳಕ್ಕೆ 112 ಪೊಲೀಸರು ಭೇಟಿ ನೀಡಿದ್ದಾರೆ.

- Advertisement -

Related news

error: Content is protected !!