



ಚಂದಳಿಕೆ: ಯುವಕೇಸರಿ ಅಬೀರಿ-ಅತಿಕಾರಬೈಲು (ರಿ.) ಚಂದಳಿಕೆ ಸಂಘಟನೆಯ ದಶಮನೋತ್ಸವ ಕಾರ್ಯಕ್ರಮವು ಸರಕಾರಿ ಹಿರಿಯ ಪ್ರಾರ್ಥಮಿಕ ಶಾಲೆ ಚಂದಳಿಕೆಯ “ದಿ.ವಿಠಲ ಪೂಜಾರಿ” ವೇದಿಕೆಯಲ್ಲಿ ನಡೆಯಿತು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವಕೇಸರಿ ಸಂಘದ ಅಧ್ಯಕ್ಷ ವನೀತ್ ಸಾಲಿಯಾನ್ ಅಬೀರಿಯವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪುತ್ತೂರು ವಿಧಾನಸಭಾ ಕ್ಷೇತ್ರ ಶಾಸಕ ಅಶೋಕ್ ಕುಮಾರ್ ರೈ ಕೋಡಿಬಾಂಡಿ, ಯುವಕೇಸರಿ ಸಂಘದ ಗೌರವಾಧ್ಯಕ್ಷ, ಭಾರತೀಯ ಜನತಾ ಪಾರ್ಟಿ ಪುತ್ತೂರು ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು, SLV ಗ್ರೂಪ್ ಮೈಸೂರು ಇದರ ಮಾಲಕ ದಿವಾಕರ್ ದಾಸ್ ನೆರ್ಲಾಜೆ, ಹಿಂದೂ ಧಾರ್ಮಿಕ ಮುಖಂಡ ಅರುಣ್ ಕುಮಾರ್ ಪುತ್ತಿಲ, ದಿನಕರ ಭಟ್ ಮಾವೆ, ಜಯರಾಮ ರೈ ವಕೀಲರು, ಶ್ರೀಮತಿ ಭವಾನಿ ರೈ ಕೊಲ್ಯ, ವಿಟ್ಲ ಪಟ್ಟಣ ಪಂಚಾಯತ್ ಅಧ್ಯಕ್ಷ ಕರುಣಾಕರ ನಾಯ್ತೋಟು, ವಿಟ್ಲ ಪಟ್ಟಣ ಪಂಚಾಯತ್ ಸದಸ್ಯೆ ರಕ್ಷಿತಾ ಸನತ್ ಸಾಲಿಯಾನ್ ಚಂದಳಿಕೆ, ಸಮರ್ಪಣ್ ಸಂಘಟನೆಯ ಅಧ್ಯಕ್ಷ ಯಶವಂತ್ ಪೂಜಾರಿ, ಚಂದಳಿಕೆ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಶ್ರೀಮತಿ ಸುಮಾ ದೇಜಪ್ಪ, ವಿಟ್ಲ ಮುಡ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷ ಪುನೀತ್ ಮಾಡತ್ತಾರು, ಯುವಕೇಸರಿಯ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಪೂಜಾರಿ ಪಟ್ಲ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ಶೇಖರ ಪರವ ಎರ್ಮೆನಿಲೆ, ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ಗೋಪಾಲ ಜೋಗಿ ಕಾಪುಮಜಲು, ಜಿಲ್ಲಾ ಶ್ರೇಷ್ಠ ಪ್ರಗತಿಪರ ರೈತ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ ಗೌಡ ಕಟ್ಟತ್ತಿಲ, ಉದ್ಯಮದ ಜೋತೆ ಸಮಾಜಸೇವೆ ಮಾಡುತಿರುವ ಸಾನ್ವಿ ಕನ್ ಸ್ಟ್ರಕ್ಷನ್ ಮಾಲಕ ತಾರನಾಥ ಬೋಳಿಗದ್ದೆ, ಅಂತರಾಷ್ಟ್ರೀಯ ಮಟ್ಟದ ಹ್ಯಾಂಡ್ ಬಾಲ್ ತರಬೇತುದಾರಾಗಿ ನೇಪಾಲದಲ್ಲಿ ಭಾರತ ತಂಡಕ್ಕೆ ಚಿನ್ನದ ಪದಕ ತಂದುಕೊಟ್ಟ ಶ್ರೀನಿವಾಸ ಗೌಡ ನೆಕ್ಕಿಲಾರು, ಜಿಲ್ಲಾ ಮಟ್ಟದ ಕಬಡ್ಡಿ ಉತ್ತಮ ರೈಡರ್ ಹಾಗೂ ಮೈಸೂರು ವಿಭಾಗ ಮಟ್ಟದ ಕಬಡ್ಡಿಯಲ್ಲಿ ಭಾಗವಹಿಸಿರುವ ಚಂದಳಿಕೆ ಶಾಲೆಯ ವಿದ್ಯಾರ್ಥಿ ಜಯರಾಜ್ ಜೋಗಿಬೆಟ್ಟು ಇವರುಗಳನ್ನು ಸನ್ಮಾನಿಸಲಾಯಿತು. ಮೈಸೂರು SLV ಗ್ರೂಪ್ ಕಂಪೆನಿಯ ಸ್ಥಾಪಕ ಸಮಾಜ ಸೇವಾ ಕಾರ್ಯವನ್ನು ಮಾಡುತಿರುವ ದಿವಾಕರ್ ದಾಸ್ ನೇರ್ಲಾಜೆಯವರನ್ನು ಅಭಿನಂದಿಸಲಾಯಿತು.



ವಿಟ್ಲ ಕಾಶಿಮಠ ನಿವಾಸಿ ಶಾಂತ ಇವರು ಅನಾರೋಗ್ಯದಿಂದ ಬಳಲುತ್ತಿದ್ದು ಇವರ ಚಿಕಿತ್ಸೆಗಾಗಿ 10,000 ರೂ ಮೌಲ್ಯದ ಚೆಕ್ ಮತ್ತು ದೈನಂದಿನ ಖರ್ಚಿಗಾಗಿ 52 ಕೆಜಿ ಅಕ್ಕಿಯನ್ನು ವಿತರಣೆ ಮಾಡಲಾಯಿತು. ಚಂದಳಿಕೆ ಶಾಲೆಗೆ ರೂ.22,000 ಮೌಲ್ಯದ ಸಿಸಿ ಕ್ಯಾಮರಾ ನೀಡಲಾಯಿತು. ಕಳೆದ 10ವರ್ಷಗಳ ಹಿಂದೆ ಸಂಘಟನೆಯು ಆರಂಭಗೊಂಡು ಕಳೆದ 6 ವರ್ಷಗಳಿಂದ ದತ್ತಿನಿಧಿ ಯೋಜನೆಯಡಿಯಲ್ಲಿ ಬಡ ವರ್ಗದ ಅನಾರೋಗ್ಯ ಪೀಡಿತರಿಗೆ ಒಟ್ಟು 7,99,530 ಧನ ಸಹಾಯ ಮತ್ತು ಸಾವಿರಾರು ಕೆ.ಜಿ ಅಕ್ಕಿಯನ್ನು ವಿತರಣೆ ಮಾಡಲಾಯಿತೆಂದು ಸಂಘದ ಕಾರ್ಯಾಧ್ಯಕ್ಷ ಯೋಗೀಶ ಕೇಪುಳಗುಡ್ಡೆ ವರದಿ ವಾಚಿಸಿದರು.
ಯುವಕೇಸರಿಯ ಸಂಚಾಲಕ ಸುಶಾಂತ್ ಸಾಲಿಯಾನ್ ಚಂದಳಿಕೆ ಸ್ವಾಗತಿಸಿ, ಸಂಚಾಲಕ ದಿವಾಕರ ಶೆಟ್ಟಿ ಅಬೀರಿ ವಂದಿಸಿದರು, ಸಾಂಸ್ಕೃತಿಕ ಕಾರ್ಯದರ್ಶಿ ಗಣೇಶ್ ಅಬೀರಿ ಸಹಕರಿಸಿದರು. ಗೌರವ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು ಪ್ರಸ್ತಾಪಿಸಿ, ಹರೀಶ ಪೂಜಾರಿ ವಿಟ್ಲ ಕಾರ್ಯಕ್ರಮ ನಿರೂಪಿಸಿದರು.



ಸಭಾ ಕಾರ್ಯಕ್ರಮದ ನಂತರ ಶ್ರೀ ಶಾರದಾ ಅಂಧರ ಗೀತಗಾಯನ ಕಲಾ ಸಂಘ (ರಿ.) ಮಂಗಳೂರು ಇವರಿಂದ ರಸಮಂಜರಿ, ನಂತರ ಸಾರ್ವಜನಿಕ ಅನ್ನಸಂತರ್ಪಣೆ ನಡೆದು ರಾತ್ರಿ ಗಂಟೆ 9.00 ಕ್ಕೆ ಚೈತನ್ಯ ಕಲಾವಿದರು ಬೈಲೂರು ಪ್ರಸನ್ನ ಶೆಟ್ಟಿ ಬೈಲೂರು ಇವರ “ಅಷ್ಟೆಮಿ” ಸಾಂಸಾರಿಕ ತುಳು ನಾಟಕ ನಡೆಯಿತು.



