Sunday, June 29, 2025
spot_imgspot_img
spot_imgspot_img

ನಿಟಿಲಾಪುರ: (ಮಾ.14-19) ಶ್ರೀ ನಿಟಿಲಾಕ್ಷ ಸದಾಶಿವ ದೇವಸ್ಥಾನದಲ್ಲಿ ಶ್ರೀ ದೇವರ ವರ್ಷಾವಧಿ ಜಾತ್ರಾ ಮಹೋತ್ಸವ ಹಾಗೂ ಶ್ರೀ ಮನ್ಮಹಾರಥೋತ್ಸವ

- Advertisement -
- Advertisement -

ನಿಟಿಲಾಪುರ: ಮೊಗರ್ನಾಡು ಸಾವಿರ ಸೀಮೆಯ ಶ್ರೀ ನಿಟಿಲಾಕ್ಷ ಸದಾಶಿವ ದೇವಸ್ಥಾನ ನಿಟಿಲಾಪುರದಲ್ಲಿ ಶ್ರೀ ದೇವರ ವರ್ಷಾವಧಿ ಜಾತ್ರಾ ಮಹೋತ್ಸವ ಹಾಗೂ ಶ್ರೀ ಮನ್ಮಹಾರಥೋತ್ಸವವು ಮಾರ್ಚ್ 14-3-2025ನೇ ಶುಕ್ರವಾರದಿಂದ 19-3-2025ನೇ ಬುಧವಾರದವರೆಗೆ ಬ್ರಹ್ಮಶ್ರೀ ನೀಲೇಶ್ವರ ವೇ| ಮೂ| ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ.

ದಿನಾಂಕ:14-3-2025ನೇ ಶುಕ್ರವಾರ ಪೂರ್ವಾಹ್ನ ಶ್ರೀ ದುರ್ಗಾಲಯ ದೈವಸ್ಥಾನದಿಂದ -ಶ್ರೀ ದುರ್ಗಾಲಯ, ಪಿಲಿಚಾಮುಂಡಿ, ಪಂಜುರ್ಲಿ ದೈವಗಳ ಭಂಡಾರ ಆಗಮನವಾಗಲಿದೆ. ಶ್ರೀ ದೇವರಿಗೆ ಏಕಾದಶ ರುದ್ರಾಭಿಷೇಕ ನಡೆಯಲಿದೆ. ಮಧ್ಯಾಹ್ನ 12:00ರಿಂದ ಮಹಾಪೂಜೆ, ಧ್ವಜಾರೋಹಣ, ನಿತ್ಯ ಬಲಿ, ಅನ್ನ ಸಂತರ್ಪಣೆ ನಡೆಯಲಿದೆ. ಸಂಜೆ 6:00ರಿಂದ ಭಕ್ತಾದಿಗಳಿಂದ ಭಜನಾ ಸೇವೆ ನಡೆದು ರಾತ್ರಿ 8:00ರಿಂದ ಬಲಿ ಉತ್ಸವ, ಕಾರಂತರಕೋಡಿ ಶ್ಯಾನುಭಾಗರ ಕಟ್ಟೆಗೆ ಸವಾರಿ ನಡೆಯಲಿದೆ.

ದಿನಾಂಕ:15-03-2025ನೇ ಶನಿವಾರ ಬೆಳಗ್ಗೆ ಘಂಟೆ 7:30ರಿಂದ ದೀಪದ ಬಲಿ ಉತ್ಸವ ನಡೆದು ಮಧ್ಯಾಹ್ನ 12:00ರಿಂದ ಮಹಾಪೂಜೆ, ಅನ್ನ ಸಂತರ್ಪಣೆ ನಡೆಯಲಿದೆ. ಸಂಜೆ 6:00ರಿಂದ ಭಕ್ತಾದಿಗಳಿಂದ ಭಜನಾ ಸೇವೆ ನಡೆದು ರಾತ್ರಿ 8:00ರಿಂದ ಬಲಿ ಉತ್ಸವ, ಬೊಮ್ಮನಕೋಡಿ ಕಟ್ಟೆಗೆ ಸವಾರಿ ನಡೆಯಲಿದೆ.

ದಿನಾಂಕ:16-03-2025ನೇ ಆದಿತ್ಯವಾರ ಬೆಳಗ್ಗೆ 7:30ರಿಂದ ದೀಪದ ಬಲಿ ಉತ್ಸವ ನಡೆದು ಮಧ್ಯಾಹ್ನ 12-00ರಿಂದ ಮಹಾಪೂಜೆ, ಅನ್ನ ಸಂತರ್ಪಣೆ ನಡೆಯಲಿದೆ. ಸಂಜೆ 6:00ರಿಂದ ಭಕ್ತಾದಿಗಳಿಂದ ಭಜನಾ ಸೇವೆ ನಡೆದು ರಾತ್ರಿ 8-00ರಿಂದ ನಡು ಬಲಿ ಉತ್ಸವ, ಚಂದ್ರಮಂಡಲ ಉತ್ಸವ, ಬಟ್ಟಲು ಕಾಣಿಕೆ, ಪಿಲಿಂಜ ಕಟ್ಟೆಗೆ ಸವಾರಿ, ಉಯ್ಯಾಲೋತ್ಸವ, ದುರ್ಗಾಲಯ ದೈವದ ನೇಮೋತ್ಸವ ನಡೆಯಲಿದೆ.

ದಿನಾಂಕ:17-03-2025ನೇ ಸೋಮವಾರ ಬೆಳಗ್ಗೆ 7:30ರಿಂದ ದೀಪದ ಬಲಿ ಉತ್ಸವ, ದರ್ಶನ ಬಲಿ ಬಟ್ಟಲು ಕಾಣಿಕೆ, ತಪ್ಪಂಗಾಯಿ ನಡೆದು ಮಧ್ಯಾಹ್ನ ಘಂಟೆ 12:00ರಿಂದ ಮಹಾಪೂಜೆ ಬಳಿಕ ಮಧ್ಯಾಹ್ನ 1:30ರಿಂದ ಮಹಾಪ್ರಸಾದ ನಡೆಯಲಿದೆ. ರಾತ್ರಿ 8:00ರಿಂದ ಶ್ರೀ ಮನ್ಮಹಾರಥೋತ್ಸವ, ಸುಡುಮದ್ದು ಪ್ರದರ್ಶನ ಬಟ್ಟಲು ಕಾಣಿಕೆ, ಬಲಿ ಉತ್ಸವ, ಶಯನೋತ್ಸವ ನಡೆಯಲಿದೆ.

ದಿನಾಂಕ:18-03-2025ನೇ ಮಂಗಳವಾರ ಬೆಳಗ್ಗೆ ಶ್ರೀ ದೇವರ ಕವಾಟೋದ್ಘಾಟನೆ. ‘ತುಲಾಭಾರ ಸೇವೆ’ ನಡೆದು ಮಧ್ಯಾಹ್ನ12:00ರಿಂದ ಮಹಾಪೂಜೆ, ಅನ್ನ ಸಂತರ್ಪಣೆ ನಡೆಯಲಿದೆ. ಸಂಜೆ 4:00ರಿಂದ ಅವಭೃತ ಬಲಿ, ವಸಂತ ಕಟ್ಟೆಯಲ್ಲಿ ಪೂಜೆ, ಓಕುಳಿ ಪ್ರಸಾದ, ಅವಭೃತ ಸವಾರಿ ನಡೆಯಲಿದೆ.

ದಿನಾಂಕ:19-03-2025ನೇ ಬುಧವಾರ ಮಧ್ಯಾಹ್ನ 12:00ರಿಂದ ಮಹಾಪೂಜೆ ಶ್ರೀ ದೇವರ ಸನ್ನಿಧಿಯಲ್ಲಿ ಪಿಲಿಚಾಮುಂಡಿ ಮತ್ತು ಪಂಜುರ್ಲಿ ದೈವಗಳ ‘ನೇಮೋತ್ಸವ’ ನಡೆಯಲಿದೆ.

ದಿನಾಂಕ:26-03-2025ನೇ ಬುಧವಾರ ಶ್ರೀ ದೇವರ ಪ್ರತಿಷ್ಠಾ ದಿನದ ಪ್ರಯುಕ್ತ ಮಧ್ಯಾಹ್ನ ಶತರುದ್ರಾಭಿಷೇಕ, ಮಹಾಪೂಜೆ ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ಶ್ರೀ ದೇವರಿಗೆ ರಂಗಪೂಜೆ ನಡೆಯಲಿದೆ.

- Advertisement -

Related news

error: Content is protected !!