Wednesday, July 2, 2025
spot_imgspot_img
spot_imgspot_img

ಕಾಪು: 250 ಕೆಜಿ ಅಕ್ರಮ ಪಡಿತರ ಅಕ್ಕಿ ವಶ; ಇಬ್ಬರ ಬಂಧನ..!

- Advertisement -
- Advertisement -

ಕಾಪು: ಸರ್ಕಾರದ ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಿಂದ ಅಕ್ರಮವಾಗಿ ಅಕ್ಕಿ ಸಂಗ್ರಹಿಸಲು ಪ್ರಯತ್ನಿಸುತ್ತಿದ್ದ ಇಬ್ಬರನ್ನು ಬಂಧಿಸಲಾಗಿದೆ.

ಬಂಧಿತ ಆರೋಪಿಗಳನ್ನು ಕಾಪು ತಾಲೂಕಿನ ಹೆಜಮಾಡಿ ಗ್ರಾಮದ ನಿವಾಸಿ ಕಲಂದರ್ ಶಫಿ (43) ಮತ್ತು ಬಂಟ್ವಾಳ ತಾಲೂಕಿನ ಸಜಿಪ ಗ್ರಾಮದ ನಿವಾಸಿ ಉಬೈದುಲ್ಲಾ (31) ಎಂದು ಗುರುತಿಸಲಾಗಿದೆ.

ಕಾಪು ತಾಲೂಕಿನ ಆಹಾರ ನಿರೀಕ್ಷಕ ಎಂ.ಟಿ. ಲೀಲಾನಂದ ಅವರು ಕರ್ತವ್ಯದಲ್ಲಿದ್ದಾಗ, ಪಡಿತರ ಅಕ್ಕಿಯ ಅಕ್ರಮ ಸಾಗಾಟದ ಬಗ್ಗೆ ಮಾಹಿತಿ ಪಡೆದರು. ಶುಕ್ರವಾರ ಮಧ್ಯಾಹ್ನ 12:54 ಕ್ಕೆ, ಕಾಪು ಪಟ್ಟಣದ ನ್ಯಾಯಬೆಲೆ ಅಂಗಡಿಯ ಬಳಿ, ಪಡಿತರ ಚೀಟಿದಾರರಿಂದ ಆಟೋ ರಿಕ್ಷಾವೊಂದಕ್ಕೆ ಅಕ್ಕಿಯನ್ನು ಲೋಡ್ ಮಾಡಲಾಗುತ್ತಿದೆ ಎಂದು ವರದಿಯಾಗಿದೆ.

ಈ ಮಾಹಿತಿಯನ್ನು ಪಡೆದ ದೂರುದಾರರು ಸುಮಾರು 1:05 ಕ್ಕೆ ಸ್ಥಳಕ್ಕೆ ತೆರಳಿದ್ದಾರೆ. ಈ ವೇಳೆ ಆಟೋ ರಿಕ್ಷಾದ ಬಳಿ ಇಬ್ಬರು ವ್ಯಕ್ತಿಗಳು ಇರುವುದನ್ನು ಪತ್ತೆಮಾಡಿದ್ದಾರೆ. ಕಲಂದರ್ ಶಫಿ ಮತ್ತು ಉಬೈದುಲ್ಲಾ ಎಂಬ ಆರೋಪಿಗಳು ಫಲಾನುಭವಿಗಳಿಂದ ಸುಮಾರು 8,500 ರೂ. ಬೆಲೆಬಾಳುವ 250 ಕೆಜಿ ಅಕ್ಕಿಯನ್ನು ಆರು ಚೀಲಗಳಲ್ಲಿ ಅಕ್ರಮವಾಗಿ ಸಂಗ್ರಹಿಸಿರುವುದು ತಿಳಿದುಬಂದಿದೆ.

ಆರೋಪಿಗಳು ಪಡಿತರ ಚೀಟಿದಾರರಿಂದ ಪ್ರತಿ ಕೆಜಿಗೆ 20 ರೂ. ನಂತೆ ಪಡಿತರ ಅಕ್ಕಿಯನ್ನು ಖರೀದಿಸಿ, ಅದನ್ನು ಹೆಚ್ಚಿನ ಬೆಲೆಗೆ ಮರುಮಾರಾಟ ಮಾಡುವ ಉದ್ದೇಶದಿಂದ ಸಾಗಿಸುತ್ತಿದ್ದರು ಎನ್ನಲಾಗಿದೆ. ಮುದರಂಗಡಿಯ ಪ್ರತಾಪ್ ಎಂಬ ವ್ಯಕ್ತಿಗೆ ಅಕ್ಕಿ ಮಾರಾಟ ಮಾಡಲು ಸಾಗಿಸುತ್ತಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!