Friday, June 27, 2025
spot_imgspot_img
spot_imgspot_img

ಮೂಡುಬಿದಿರೆ: ಗೋ ಕಳವು ಪ್ರಕರಣ; ಓರ್ವನ ಬಂಧನ..!

- Advertisement -
- Advertisement -

ಮೂಡುಬಿದಿರೆ: ಮನೆಯೊಂದರ ಹಟ್ಟಿಯಿಂದ ಗೋ ಕಳವುಗೈದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಓರ್ವ ಆರೋಪಿಯನ್ನು ಬಂಧಿಸಿದ ಘಟನೆ ಮೂಡುಬಿದಿರೆಯ ಬೆಳುವಾಯಿ ಗ್ರಾಮದಲ್ಲಿ ನಡೆದಿದೆ.

ಬಂಧಿತ ಆರೋಪಿಯನ್ನು ಪುತ್ತಿಗೆ ಗ್ರಾಮ ಮುಂಡೇಲುವಿನ ಮೊಹಮ್ಮದ್ ಆರೀಫ್ ಎಂದು ಗುರುತಿಸಲಾಗಿದೆ.

ಮಾರ್ಚ್ 18 ರಂದು ಬೆಳಗಿನ ಜಾವ ಸುಮಾರು 5 ಗಂಟೆಗೆ ಮೂಡುಬಿದ್ರೆಯ ಬೆಳುವಾಯಿ ಗ್ರಾಮದ ಖಂಡಿಗ ದರ್ಖಸು ನಿವಾಸಿ, ಸೋಮನಾಥ ಕೋಟ್ಯಾನ್ ಎಂಬವರ ಹಟ್ಟಿಯಿಂದ ಮೂವರು ಖದೀಮರು ದನಗಳನ್ನು ಕದ್ದಿದ್ದರು. ಮನೆಯ ಹತ್ತಿರ ನಾಯಿಗಳು ಬೊಗಳುವ ಶಬ್ದವನ್ನು ಕೇಳಿ ನಿದ್ರೆಯಿಂದ ಎಚ್ಚರಗೊಂಡು ಮನೆಯ ಲೈಟ್ ಆನ್ ಮಾಡಿ ಹೊರಗೆ ಬಂದು ನೋಡಿದಾಗ ಸಿಲ್ವರ್ ಬಣ್ಣದ ಕಾರೊಂದು ಮನೆಯ ಹಿಂಭಾಗ ನಿಂತಿದ್ದು ಡ್ರೈವರ್ ಸೀಟ್ ನಲ್ಲಿ ಒಬ್ಬ ಕುಳಿತುಕೊಂಡು ಕಾರು ಸ್ಟಾರ್ಟ್ ನಲ್ಲಿಯೇ ಇರಿಸಿ, ಉಳಿದ ಇಬ್ಬರು ಹಟ್ಟಿಯಲ್ಲಿ ಕಟ್ಟಿ ಹಾಕಿದ್ದ 2 ದನ ಮತ್ತು 1 ಕರುವನ್ನು ಕಳ್ಳತನ ಮಾಡಿಕೊಂಡು ಕಾರಿಗೆ ತುಂಬಿಸಿಕೊಂಡು ಕಾರನ್ನು ವೇಗವಾಗಿ ಚಲಾಯಿಸಿಕೊಂಡು ಹೋಗಿದ್ದರು.

ದನಗಳನ್ನು ಕಡಿದು ಮಾಂಸ ಮಾಡಿ ಮಾರಾಟ ಮಾಡುವ ಉದ್ದೇಶದಿಂದ ಕಳವುಗೈದಿರುವ ಬಗ್ಗೆ ಮೂಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಓರ್ವನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಉಳಿದ ಆರೋಪಿಗಳ ಪತ್ತೆಗೆ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ.

- Advertisement -

Related news

error: Content is protected !!