

ಮಂಗಳೂರು: SCDCC ಬ್ಯಾಂಕ್ ನ ಅಧ್ಯಕ್ಷ ರಾಜೇಂದ್ರ ಕುಮಾರ್ ರವರಿಗೆ ಮಂಗಳೂರು ವಿ ವಿ ಗೌರವ ಡಾಕ್ಟರೇಟ್ ಪದವಿ ನೀಡಿದ್ದು, ಹಣ ಕೊಟ್ಟು ಡಾಕ್ಟರೇಟ್ ಪಡೆದಿದ್ದಾರೆ ಎಂದು ಸಾರ್ವಜನಿಕ ವಲಯದಲ್ಲಿ ಆರೋಪ ಕೇಳಿಬಂದಿತ್ತು. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ವೈರಲ್ ಆಗಿತ್ತು. ಈ ವಿಚಾರವಾಗಿ SCDCC ಬ್ಯಾಂಕ್ ನ ಅಧ್ಯಕ್ಷ ರಾಜೇಂದ್ರ ಕುಮಾರ್ ರವರು ಪತ್ರಿಕಾಗೋಷ್ಠಿಯಲ್ಲಿ ದೃಶ್ಯಮಾಧ್ಯಮದವರ ವಿರುದ್ಧ ಕಿಡಿಕಾರಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು “ಒಂದು ಸಣ್ಣ ಸುದ್ದಿಯೂ ನಿಮ್ಮ ಚಾನಲ್ ನಲ್ಲಿ ಬರುವುದಿಲ್ಲ, ಮತ್ತೆ ಎಂತಕ್ಕೆ ನೀವು ಬರುವುದು ನನ್ನ ಪಟ ತೆಗೀಲಿಕ್ಕ ? ಅದಕ್ಕೆ ನನ್ನಲ್ಲಿ ಜನ ಉಂಟು, ನೀವು ಬರಬೇಕಿಲ್ಲ. ದಿನ ಪತ್ರಿಕೆಗಳು ಮಾತ್ರ ಪತ್ರಿಕಾಗೋಷ್ಟಿಗೆ ಬಂದು ವರದಿ ಮಾಡುತ್ತಾರೆ. ಅವರು ಸಾಕು ನನಗೆ. ಯಾವತ್ತಾದರು ನನ್ನ ಒಂದು ಸುದ್ದಿ ನಿಮ್ಮ ಚಾನಲ್ ಗಳಲ್ಲಿ ಬಂದಿದೆಯಾ ? ಮತ್ತೆ ಯಾಕೆ ಈ ದೊಣ್ಣೆ (ಮೈಕ್) ನನ್ನ ಮುಂದೆ ಇಡುವುದು. ನನ್ನನ್ನು ಖುಷಿ ಪಡಿಸಲಿಕ್ಕಾ ! ತೆಗೆದುಕೊಂಡು ಹೋಗಿ ಎಂದು ದೃಶ್ಯ ಮಾಧ್ಯಮದ ವಿರುದ್ಧ ತನ್ನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭಾರತೀಯ ರಿಸರ್ವ್ ಬ್ಯಾಂಕ್ ಮಾರ್ಚ್ 26, 2025 ರಂದು ಹೊರಡಿಸಿದ ಆದೇಶದ ಮೂಲಕ, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಲಿಮಿಟೆಡ್, ಕರ್ನಾಟಕದ ಮೇಲೆ ₹5.00 ಲಕ್ಷದ ದಂಡವನ್ನು ವಿಧಿಸಿದೆ. ಈ ದಂಡವನ್ನು ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ, 1949 ನ ಪ್ರಸ್ತಾಪಿತ ನಿಯಮಗಳನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ವಿಧಿಸಲಾಗಿದೆ ಎಂಬ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗಿದೆ.