- Advertisement -
- Advertisement -




ವಿಟ್ಲ: 2024-25 ರ ಸಾಲಿನ ಮುಖ್ಯಮಂತ್ರಿ ಚಿನ್ನದ ಪದಕ ಪುರಸ್ಕೃತ ವಿಟ್ಲ ಇನ್ಸ್ಪೆಕ್ಟರ್ ನಾಗರಾಜ್ ಹೆಚ್.ಇ ರವರನ್ನು ಹಾಸನದ ಪ್ರಖ್ಯಾತ ವೈದ್ಯ ಡಾ| ಬಶೀರ್ ಜನಪ್ರಿಯರವರು ವಿಟ್ಲ ಪೊಲೀಸ್ ಠಾಣೆಯಲ್ಲಿ ಸನ್ಮಾನಿಸಿದರು.

ಈ ಸಂದರ್ಭ ಸಬ್ ಇನ್ಸ್ಪೆಕ್ಟರ್ ವಿದ್ಯಾ ,ಲಯನ್ಸ್ ಕ್ಲಬ್ ಪ್ರಾಂತೀಯ ನಿಕಟ ಪೂರ್ವ ಅಧ್ಯಕ್ಷ ಸುದರ್ಶನ ಪಡಿಯಾರ್, ಕಂಬಳಬೆಟ್ಟು ಜನಪ್ರಿಯ ಸ್ಕೂಲ್ನ ನೌಶೀನ್ ಬದ್ರಿಯಾ, ಸಫ್ವಾನ್ ಪಿಲಿಕಲ್, ಜೆಡಿಎಸ್ ಮುಂದಾಳು ಆಶಿಕ್ ವಿಟ್ಲ ,ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯ ಅಬೂಬಕರ್ ಅನಿಲಕಟ್ಟೆ, ಇಸ್ಮಾಯಿಲ್ ಒಕ್ಕೆತ್ತೂರು ಮುಂತಾದವರು ಉಪಸ್ಥಿತರಿದ್ದರು.
- Advertisement -








