Sunday, July 6, 2025
spot_imgspot_img
spot_imgspot_img

ವೀರಕಂಭ: (ಜುಲೈ. 21-25) ಮಡಿವಾಳ ಕೋಡಿ ತಿರ್ತ ಕೆಲಿಂಜದಲ್ಲಿ ಅಷ್ಟಮಂಗಳ ಪ್ರಶ್ನಾ ಚಿಂತನೆ ಮರು ಪ್ರಾರಂಭ

- Advertisement -
- Advertisement -

ವೀರಕಂಭ: ಬಂಟ್ವಾಳ ತಾಲೂಕು ವೀರಕಂಭ ಗ್ರಾಮದ ಮಡಿವಾಳ ಕೋಡಿ ತಿರ್ತ ಕೆಲಿಂಜದಲ್ಲಿ ಮೇ.4 ನೇ ಆದಿತ್ಯವಾರದಿಂದ ಪ್ರಾರಂಭಗೊಂಡ ಅಷ್ಟಮಂಗಲ ಪ್ರಶ್ನಾ ಚಿಂತನೆ ಮರು ಪ್ರಾರಂಭಗೊಳ್ಳಲಿದೆ. ದೈವಜ್ಞ ರತ್ನ ಬ್ರಹ್ಮ ಶ್ರೀ ಒಳಕುಂಜ ವೆಂಕಟರಮಣ ಭಟ್ಟರ ಹಾಗೂ ಮುರಳೀ ಶ್ರೀಕೃಷ್ಣ ಭಟ್ಟರ ನೇತೃತ್ವದಲ್ಲಿ ಜುಲೈ 21 ರಿಂದ 25 ರವರೆಗೆ ಅಷ್ಟಮಂಗಲ ಪ್ರಶ್ನಾ ಚಿಂತನೆ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ತಾವೆಲ್ಲರೂ ಭಾಗವಹಿಸಿ ಶ್ರೀ ದೈವಗಳ ಕೃಪೆಗೆ ಪಾತ್ರರಾಗಬೇಕಾಗಿ ಗ್ರಾಮಸ್ಥರು ಹಾಗೂ ಹತ್ತು ಸಮಸ್ತರು ಹಾಗೂ ದೇಯಿ ಪೊಂಜೆ ಯಾನೆ ದೇವಂಜೆ ವಂಶಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!