Friday, September 4, 2026
spot_imgspot_img
spot_imgspot_img

ವಂದೇ ಮಾತರಂ ಹಾಡಲು ಸಾಧ್ಯವಿಲ್ಲ – ಎಸ್‌ಪಿ ನಾಯಕ ಅಬು ಅಸಿಮ್ ಅಜ್ಜಿ

- Advertisement -
- Advertisement -

ಮುಂಬೈ: ಕೆಲವು ಹಾಡುಗಳು ಪ್ರಾರ್ಥನೆಗೆ ಸಂಬಂಧಿಸಿದವುಗಳಾಗಿದೆ. ಆದ್ದರಿಂದ ಮುಸಲ್ಮಾನರು ವಂದೇ ಮಾತರಂ ಪಠಿಸಲು ಸಾಧ್ಯವಿಲ್ಲ ಎಂದು ಸಮಾಜವಾದಿ ಪಕ್ಷದ ಮಹಾರಾಷ್ಟ್ರ ನಾಯಕ ಅಬು ಅಸಿಮ್ ಅಜ್ಜಿ ಹೇಳಿದ್ದಾರೆ.ಬಿಜೆಪಿ ಮುಂಬೈ ನಗರವು ಅಜ್ಜಿ ಅವರನ್ನು ರಾಷ್ಟ್ರಕ್ಕೆ ಸಂಬಂಧಿಸಿದ ಗೀತೆ ವಂದೇ ಮಾತರಂನ ಸಾಮೂಹಿಕ ಗಾಯನ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ನೀಡಿದ ಆಹ್ವಾನವನ್ನು ನಿರಾಕರಿಸಿ, ಅವರು ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ.

ವಂದೇ ಮಾತರಂ 150 ವರ್ಷಗಳನ್ನು ಗುರುತಿಸುವ ಮಹಾರಾಷ್ಟ್ರ ಸರ್ಕಾರದ ಒಂದು ವಾರದ ಆಚರಣೆಯ ಭಾಗವಾಗಿ ಮುಂಬೈನಲ್ಲಿರುವ ಎಸ್‌ಪಿ ನಾಯಕನ ನಿವಾಸದ ಬಳಿ ಶುಕ್ರವಾರ ಬೆಳಗ್ಗೆ ನಿಗದಿಯಾಗಿದ್ದ ಕಾರ್ಯಕ್ರಮಕ್ಕೆ ಸತಮ್ ಅವರು ಅಜ್ಜಿ ಅವರನ್ನು ಆಹ್ವಾನಿಸಿದ್ದರು.ಇದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನೀವು ನಮ್ಮೊಂದಿಗೆ ನಮಾಜ್ ಮಾಡಲು ಹೇಗೆ ಸಾಧ್ಯವಿಲ್ಲವೋ ಹಾಗೆಯೇ ನಾನು ವಂದೇ ಮಾತರಂ ಹಾಡಲು ಸಾಧ್ಯವಿಲ್ಲ. ಯಾವುದೇ ವ್ಯಕ್ತಿಯನ್ನು ರಾಷ್ಟ್ರಗೀತೆ ಹಾಡುವಂತೆ ಒತ್ತಾಯಿಸುವುದು ಅವರ ಧಾರ್ಮಿಕ ಸ್ವಾತಂತ್ರ್ಯ ಮತ್ತು ಆತ್ಮಸಾಕ್ಷಿಯ ಮೂಲಭೂತ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ ಎಂದು ತಿಳಿಸಿರುವುದಾಗಿದೆ.

- Advertisement -

Related news

error: Content is protected !!