




ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ನೂತನ ಅಧ್ಯಕ್ಷರಾಗಿ ವೆಂಕಟೇಶ್ ಪ್ರಸಾದ್ ಆಯ್ಕೆಯಾಗಿದ್ದಾರೆ. ಕೆಎಸ್ಸಿಎ ಚುನಾವಣೆಯಲ್ಲಿ ವೆಂಕಟೇಶ್ ಪ್ರಸಾದ್ ಬಣ ಭರ್ಜರಿ ಗೆಲುವು ಸಾಧಿಸಿ ಅಧಿಕಾರದ ಚುಕ್ಕಾಣಿ ಹಿಡಿದಿದೆ.
ನೂತನ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಪರ 749 ಮತಗಳು, ಎದುರಾಳಿ ಶಾಂತಕುಮಾರ್ ಪರ 558 ಮತಗಳು ಚಲಾವಣೆ ಆಗಿದ್ದವು. ವೆಂಕಟೇಶ್ ಪ್ರಸಾದ್, 191 ಮತಗಳ ಅಂತರದಿಂದ ಗೆಲುವು ಸಾಧಿಸಿದರು. ಇನ್ನು, ಉಪಾಧ್ಯಕ್ಷರಾಗಿ ಸುಜಿತ್ ಸೋಮಸುಂದರ್ ಜಯಗಳಿಸಿದರೆ, ಕಾರ್ಯದರ್ಶಿಯಾಗಿ ಸಂತೋಷ್ ಮೆನನ್ಗೆ ಗೆಲುವು ಪಡೆದುಕೊಂಡರು. ಜಂಟಿ ಕಾರ್ಯದರ್ಶಿಯಾಗಿ BK ರವಿಗೆ ಜಯಗಳಿಸಿದರು.
ಫಲಿತಾಂಶ ಬೆನ್ನಲ್ಲೇ ಮಾತನ್ನಾಡಿರುವ ವೆಂಕಟೇಶ್ ಪ್ರಸಾದ್ ಈ ಗೆಲುವಿಗೆ ಕಾರಣ ನಮ್ಮ ಸದಸ್ಯರು ಇಟ್ಟಿರುವ ನಂಬಿಕೆ. ಕಳೆದ 3 ವರ್ಷಗಳಲ್ಲಾದ ಅನಾಹುತಗಳಿಂದ ಬೇಸರದಲ್ಲಿದ್ರು. ಕಾಲ್ತುಳಿತ ಮಾತ್ರವಲ್ಲ, ಕ್ರಿಕೆಟ್ನಲ್ಲಿ ಅನಾಹುತಗಳಾದ್ವು. ಪ್ಲ್ಯಾನಿಂಗ್, ಸ್ಟೇಡಿಯಂ, ಅಕಾಡೆಮಿ ಸರಿಯಾಗಿರಲಿಲ್ಲ. ಸದಸ್ಯರು ಹೊಸ ಭರವಸೆಗಾಗಿ ನಮ್ಮನ್ನ ಆಯ್ಕೆ ಮಾಡಿದ್ದಾರೆ. ಈ ವಿಕ್ಟರಿ ಕ್ರಿಕೆಟ್ಗೋಸ್ಕರ. ರಾಷ್ಟ್ರೀಯ, ಅಂತಾರಾಷ್ಟ್ರೀಯ ಕ್ರಿಕೆಟ್ ಮತ್ತೆ ವಾಪಸ್ ಬರಬೇಕು. ಯಾವುದೇ ಕಾರಣಕ್ಕೂ IPL ಪಂದ್ಯಗಳನ್ನ ಬಿಡಲು ಸಾಧ್ಯವಿಲ್ಲ. ಸರ್ಕಾರ, BCCI ಜೊತೆಗೂ ಮಾತನಾಡಬೇಕಿದೆ. ಬೆಂಬಲ ಕೊಟ್ಟ ಲೆಜೆಂಡರಿ ಕ್ರಿಕೆಟರ್ಸ್ ನಮ್ಮ ಜೊತೆಗಿರುತ್ತಾರೆ. ರಾಜ್ಯ ಸರ್ಕಾರ ಕೂಡ KSCAಯಲ್ಲಿ ಬದಲಾವಣೆ ಬಯಸಿತ್ತು ಎಂದರು.








