Sunday, June 29, 2025
spot_imgspot_img
spot_imgspot_img

ಪುತ್ತೂರು: ಮದುವೆ ಡಿನ್ನರ್ ಬಳಿ ಇತ್ತಂಡಗಳ ನಡುವೆ ಹೊಡೆದಾಟ!! – ಗ್ರಾ.ಪಂ ಮಾಜಿ ಅಧ್ಯಕ್ಷ ಸಹಿತ ನಾಲ್ವರು ಆಸ್ಪತ್ರೆಗೆ ದಾಖಲು

- Advertisement -
- Advertisement -

ಪುತ್ತೂರು: ಭಕ್ತಕೋಡಿ ಶ್ರೀರಾಮ ಭಜನಾ ಮಂದಿರದ ಬಳಿ ನಡೆದ ಪ್ರತಿಭಟನೆ ಮತ್ತು ರಾಜಕೀಯ ವೈಶಮ್ಯದ ಆರೋಪಕ್ಕೆ ಸಂಬಂಧಿಸಿ ಮದುವೆ ಡಿನ್ನರ್ ಬಳಿ ಇತ್ತಂಡದ ನಾಲ್ವರ ನಡುವೆ ಮಾತಿನ ಚಕಮಕಿ ನಡೆದು ಪರಸ್ಪರ ಹೊಡೆದಾಟದಿಂದ ಮುಂಡೂರು ಗ್ರಾ.ಪಂ ಮಾಜಿ ಅಧ್ಯಕ್ಷ ಎಸ್.ಡಿ.ವಸಂತ ಸಹಿತ ನಾಲ್ವರು ಪುತ್ತೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

ಮುಂಡೂರು ಗ್ರಾ.ಪಂ ಮಾಜಿ ಅಧ್ಯಕ್ಷ ಸರ್ವೆ ಗ್ರಾಮದ ಸರ್ವೆದೋಳಗುತ್ತು ನಿವಾಸಿ ಎಸ್.ಡಿ.ವಸಂತ ಮತ್ತು ಭಕ್ತಕೋಡಿ ಶ್ರೀರಾಮ ಭಜನಾ ಮಂದಿರದ ಅಧ್ಯಕ್ಷ ಸರ್ವೆ ಗ್ರಾಮದ ಕರಂಬಾರು ನಿವಾಸಿ ಸುಬ್ರಹ್ಮಣ್ಯ ಕರಂಬಾರು ಅವರು ಪುತ್ತೂರು ಮಹಾವೀರ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

ಮೇಗಿನಗುತ್ತು ನಿವಾಸಿ ಸ್ವಸ್ತಿಕ್ (26ವ) ಮತ್ತು ಭಕ್ತಕೋಡಿ ನಿವಾಸಿ ಮೈಕ್ ಅಪರೇಟರ್ ಸಂದೀಪ್ (22ವ) ಪುತ್ತೂರು ಅದರ್ಶ ಅಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

- Advertisement -

Related news

error: Content is protected !!