- Advertisement -
- Advertisement -
ವಿಟ್ಲ: ಎರಡು ದಿನಗಳ ಹಿಂದೆ ವಿಟ್ಲ ಪುತ್ತೂರು ರಸ್ತೆಯಲ್ಲಿರುವ ತರಕಾರಿ ಅಂಗಡಿಯಲ್ಲಿ ಕಾಗದದಲ್ಲಿ ಕಟ್ಟಿರುವ ಚಿನ್ನ ಸಿಕ್ಕಿರುತ್ತದೆ. ಇದನ್ನು ಸಿಕ್ಕವರು ಸಾಮಾಜಿಕ ಜಾಲತಾಣಗಳಲ್ಲಿ ತಿಳಿಸಿದರು.
ಇಂದು ಚಿನ್ನದ ವಾರಿಸುದಾರರಾದ ವಿಠ್ಠಲ್ ಶೆಟ್ಟಿಗಾರ್ ಮೇಗಿನ ಪೇಟೆ ಇವರು ಸರಿಯಾದ ಗುರುತನ್ನು ತಿಳಿಸಿ ಚಿನ್ನವನ್ನು ಪಡೆದಿರುತ್ತಾರೆ. ಚಿನ್ನವನ್ನು ಹಸ್ತಾಂತರಿಸಿದ ಎಮ್. ಎಮ್.ಫ್ರೂಟ್ಸ್ ಮಾಲಕ ಹಂಝ ಉಕ್ಕುಡ ರವರ ಈ ಮಾನವೀಯ ಕಾರ್ಯಕ್ಕೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
- Advertisement -