- Advertisement -
- Advertisement -




ಎರುಂಬು ಮೋಹನದಾಸ್ ರೈ ಯವರ ನಿರ್ದೇಶನದ ದಿವ್ಯಜ್ಯೋತಿ ಕಲಾವಿದರ ಈ ವರ್ಷದ ಹೊಸ ನಾಟಕದ ಮೂಹೂರ್ತವು ಕೇಪು ಶ್ರೀ ಸುಬ್ರಾಯ ದೇವಸ್ಥಾನ ಹಾಗೂ ಕೇಪು ಶ್ರೀ ಉಳ್ಳಾಲ್ತಿ ದೇವಸ್ಥಾನದಲ್ಲಿ ಮಾ.15 ರಂದು ಜರಗಿತು. ದೇವಸ್ಥಾನದ ಅರ್ಚಕರು, ತಂಡದ ಹಿರಿಯ ಮತ್ತು ಹೊಸ ಕಲಾವಿದರು , ಸ್ಥಳೀಯ ಕಲಾ ಪೋಷಕರು ಉಪಸ್ಥಿತರಿದ್ದರು.


ಪ್ರಸ್ತುತ ತಂಡವು “ಮದಿಮೆದ ಇಲ್ಲಡ್” ಸಾಮಾಜಿಕ ಹಾಸ್ಯಮಯ ಪ್ರದರ್ಶನಗಳನ್ನು ಯಶಸ್ವಿಯಾಗಿ ಹಲವು ಸ್ಥಳಗಳಲ್ಲಿ ನೀಡಿ ಜನ ಮೆಚ್ಚುಗೆ ಪಡೆದಿದೆ. ಈ ವರ್ಷದ ಹೊಸ ನಾಟಕವು ನುರಿತ ಹೊಸ ಕಲಾವಿದರೊಂದಿಗೆ, ಸಾಂಸಾರಿಕ ವಿಭಿನ್ನ ಹಾಸ್ಯವನ್ನೊಳಗೊಂಡು ಪ್ರದರ್ಶನ ನೀಡಲಿದೆ.
ಕಾರ್ಯಕ್ರಮಕ್ಕಾಗಿ ಮೋಹನದಾಸ್ ರೈ 7892830449, ಲಕ್ಷ್ಮೀಶ ಭಟ್ 9449333131, ಪ್ರವೀಣ್ ರೈ 9480797521 ಯವರನ್ನು ಸಂಪರ್ಕಿಸಬಹುದು.
- Advertisement -








