
ಕುಂಡಡ್ಕ: ವಿಟ್ಲ ಮುಡ್ನೂರು ಶ್ರೀ ವಿಷ್ಣುಮೂರ್ತಿ ಯುವಕವೃಂದ (ರಿ.) ವಿಷ್ಣುನಗರದ ವತಿಯಿಂದ 13ನೇ ವಾರ್ಷಿಕೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಮೇ 2, 2026ರಂದು ಶನಿವಾರ ಸಂಜೆ 4:00 ಗಂಟೆಗೆ ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವಠಾರದಲ್ಲಿ ನಡೆಯಲಿವೆ.ಕಾರ್ಯಕ್ರಮದ ಅಂಗವಾಗಿ ಶ್ರೀ ಶನೈಶ್ಚರ ಪೂಜೆ, ಸನ್ಮಾನ ಸಮಾರಂಭ ಹಾಗೂ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.
ಪೂಜೆಯಲ್ಲಿ ಭಾಗವಹಿಸುವ ಭಕ್ತರು ಸಂಜೆ 3:30ರೊಳಗೆ ಅಗತ್ಯ ಪೂಜಾ ಸಾಮಗ್ರಿಗಳನ್ನು ತರಬೇಕೆಂದು ಆಯೋಜಕರು ಮನವಿ ಮಾಡಿದ್ದಾರೆ. ಪೂಜಾ ಸೇವೆಗೆ ರೂ.150/- ನಿಗದಿಪಡಿಸಲಾಗಿದೆ.ರಾತ್ರಿ 7:00ಕ್ಕೆ ಸಭಾ ಕಾರ್ಯಕ್ರಮ ಹಾಗೂ ಸನ್ಮಾನ ಸಮಾರಂಭ ನಡೆಯಲಿದ್ದು, ಯುವಕವೃಂದದ ಅಧ್ಯಕ್ಷ ಮನೋಜ್ ಕಂಪ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೃಷ್ಣಯ್ಯ ಕೆ. (ವಿಟ್ಲ ಅರಮನೆ), ಡಾ. ಅರುಣ್ ಶ್ಯಾಮ್ ಎಂ. (ಹಿರಿಯ ನ್ಯಾಯವಾದಿಗಳು, ಕರ್ನಾಟಕ ಉಚ್ಚ ನ್ಯಾಯಾಲಯ), ಹರಿಪ್ರಸಾದ್ ಗೌಡ ಕಟ್ನಾಜೆ (ಬೆಂಗಳೂರು), ಕೀರ್ತಿಶ್ ಪುಣಚ (ಪಿ.ಡಬ್ಲ್ಯುಡಿ ಕಾಂಟ್ರಾಕ್ಟರ್) ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.
ಈ ಸಂದರ್ಭದಲ್ಲಿ ಬ್ರಹ್ಮವಾಹಕರಾದ ಗೋಪಾಲಕೃಷ್ಣ ಅಡಿಗ, ದೈವದ ಪರಿಚಾರಕರಾದ ತೇಜಪ್ಪ ಗೌಡ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ದಯಾನಂದ ಶೆಟ್ಟಿ ಉಜಿರೆಮಾರು ಅವರನ್ನು ಸನ್ಮಾನಿಸಲಾಗುತ್ತದೆ.
ರಾತ್ರಿ 8:00ಕ್ಕೆ ಸಾರ್ವಜನಿಕ ಅನ್ನಪ್ರಸಾದ ವಿತರಣೆ ನಡೆಯಲಿದ್ದು, ಬಳಿಕ ರಾತ್ರಿ 9:00ಕ್ಕೆ ಕದಂಬ ನಾಟಕ ತಂಡದ ವತಿಯಿಂದ ‘ರಂಗಭೂಷಣ’ ಮಣಿ ಕೋಟೆಬಾಗಿಲು ಅವರ ಕಥೆ, ಸಂಭಾಷಣೆ, ನಿರ್ದೇಶನದಲ್ಲಿ ಪಿಂಗಾರ ಕಲಾವಿದರಿಂದ ಕುತೂಹಲಭರಿತ ತುಳು ಹಾಸ್ಯ ನಾಟಕ ಪ್ರದರ್ಶನಗೊಳ್ಳಲಿದೆ.ಭಗವದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದೆ.








