Sunday, June 28, 2026
spot_imgspot_img
spot_imgspot_img

ರೀಲ್ಸ್ ಮಾಡಲು ಹೋಗಿ ದೇವರಾಯನದುರ್ಗ ಬೆಟ್ಟದಿಂದ ಬಿದ್ದ ಉಪನ್ಯಾಸಕ

- Advertisement -
- Advertisement -

ತುಮಕೂರು: ರೀಲ್ಸ್ ಮಾಡಲು ಹೋಗಿದ್ದ ಉಪನ್ಯಾಸಕ ಕಾಲು ಜಾರಿ ಆಳಕ್ಕೆ ಬಿದ್ದು ಗಾಯಗೊಂಡಿರುವ ಘಟನೆ ತುಮಕೂರಿನ ದೇವರಾಯನದುರ್ಗ ಬೆಟ್ಟದಲ್ಲಿ ನಡೆದಿದೆ.

ತುಮಕೂರು ತಾಲ್ಲೂಕಿನ ಬಳ್ಳಾಪುರ ನಿವಾಸಿ ಶಿವಪ್ರಸಾದ್ ಗಾಯಗೊಂಡ ಉಪನ್ಯಾಸಕ. ಇವರು ಅರಸೀಕೆರೆಯ ಪಿಯು ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದಾರೆ.

ಶಿವಪ್ರಸಾದ್ ದೇವಾಲಯದ ಹಿಂಭಾಗದಲ್ಲಿರುವ ಬಂಡೆಯ ಮೇಲೆ ಏರಿ ರೀಲ್ಸ್ ಮಾಡುತ್ತಿದ್ದರು. ಈ ವೇಳೆ ಕಾಲು ಜಾರಿ ಆಳಕ್ಕೆ ಬಿದ್ದಿದ್ದಾರೆ. ಪರಿಣಾಮ ಅವರಿಗೆ ಗಾಯಗಳಾಗಿವೆ.

ಸ್ಥಳೀಯರು ತಕ್ಷಣವೇ ರಕ್ಷಣಾ ಕಾರ್ಯ ನಡೆಸಿ ಶಿವಪ್ರಸಾದ್ ಅವರನ್ನು ಸುರಕ್ಷಿತವಾಗಿ ಮೇಲಕ್ಕೆ ಕರೆತಂದರು. ಬಳಿಕ ಅವರನ್ನು ಸಿದ್ದಗಂಗಾ ಆಸ್ಪತ್ರೆಗೆ ದಾಖಲಿಸಲಾಗಿದೆ

- Advertisement -

Related news

error: Content is protected !!