Sunday, June 29, 2025
spot_imgspot_img
spot_imgspot_img

ಯುವರಾಜ್ ಕೇಸ್ ನಲ್ಲಿ ಬಿಗ್ ಟ್ವಿಸ್ಟ್ – ರಾಧಿಕಾ ಕುಮಾರ ಸ್ವಾಮಿಗೆ 1.25 ಕೋಟಿ ರೂ. ಹಣ ವರ್ಗಾವಣೆ ಆರೋಪ!

- Advertisement -
- Advertisement -

ಬೆಂಗಳೂರು: ಬಿಜೆಪಿ ಹಾಗೂ ಆರ್​ಎಸ್​ಎಸ್​ ಮುಖಂಡರ ಹೆಸರಿನಲ್ಲಿ ವಂಚನೆ ಮಾಡುತ್ತಿದ್ದ ಆರೋಪದ ಮೇಲೆ ಅರೆಸ್ಟ್​ ಆಗಿರುವ ಯುವರಾಜ್ ಅಲಿಯಾಸ್ ಸ್ವಾಮಿ ಪ್ರಕರಣದಲ್ಲಿ ದೊಡ್ಡ ಟ್ವಿಸ್ಟ್​ ಸಿಕ್ಕಿದೆ. ಆರೋಪಿ ಯುವರಾಜನಿಂದ ನಟಿ ರಾಧಿಕಾ ಕುಮಾರಸ್ವಾಮಿ ಖಾತೆಗೆ ₹1.25 ಕೋಟಿ ಹಣ ವರ್ಗಾವಣೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಹಣ ವರ್ಗಾವಣೆ ಬಗ್ಗೆ ಸಿಸಿಬಿಗೆ ಮಹತ್ವದ ಮಾಹಿತಿ ಸಿಕ್ಕಿದೆ. ರಾಧಿಕಾ ಅವರ ಸಹೋದರನನ್ನು ಈಗಾಗಲೇ ಸಿಸಿಬಿ ಪೊಲೀಸರು ವಿಚಾರಣೆ ಮಾಡಿದ್ದಾರೆ. ₹1.25 ಕೋಟಿ ವರ್ಗಾವಣೆ ಶಂಕೆ. ಉತ್ತರ ಕರ್ನಾಟಕದ ಪ್ರಭಾವಿ ರಾಜಕಾರಣಿಗೆ ಖೆಡ್ಡಾ ತೋಡಿದ್ದ ಯುವರಾಜ ಅವರನ್ನ ಮುಖ್ಯಮಂತ್ರಿ ಮಾಡೋದಾಗಿ ನಂಬಿಸಿದ್ದ ಎನ್ನಲಾಗಿದೆ. ಇದಕ್ಕಾಗಿ ರಾಧಿಕಾ ಕುಮಾರಸ್ವಾಮಿ ಅವರ ಸಹಾಯವನ್ನೂ ಯುವರಾಜ ಪಡೆದಿದ್ದ ಅಂತಾ ಆರೋಪ ಕೇಳಿ ಬಂದಿದೆ.

ಅಲ್ಲದೇ ಸದ್ಯ ರಾಧಿಕಾ ಅವರ ಖಾತೆಗೆ ಬೃಹತ್ ಮೊತ್ತದ ಹಣ ವರ್ಗಾವಣೆಯಾಗಿದೆಯಾ? ವರ್ಗಾವಣೆ ಆಗಿದ್ದರೆ ಅಷ್ಟು ಹಣ ವರ್ಗಾವಣೆ ಆಗಿದ್ದು ಯಾಕೆ..? ಎಂಬ ಬಗ್ಗೆ ಸಿಸಿಬಿ ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ. ಆದರೆ ಇದುವರೆಗೂ ನಟಿಗೆ ನೋಟಿಸ್ ಕೊಟ್ಟಿಲ್ಲ. ಅನುಮಾನದ ಮೇರೆಗೆ  ಸಿಸಿಬಿ ತನಿಖೆಗೆ ಮುಂದಾಗಿದೆ ಎಂದು ಸಿಸಿಬಿ ಉನ್ನತ ಮೂಲಗಳಿಂದ ಮಾಹಿತಿ ಸಿಕ್ಕಿದೆ.

- Advertisement -

Related news

error: Content is protected !!