Monday, June 30, 2025
spot_imgspot_img
spot_imgspot_img

ತೆಕ್ಕಟ್ಟೆ: ಕೊರೋನಾ ಗೆದ್ದು ಬಂದ ಒಂದೇ ಕುಟುಂಬದ 19 ಮಂದಿ ಸದಸ್ಯರು!

- Advertisement -
- Advertisement -

ತೆಕ್ಕಟ್ಟೆ: ಕೋವಿಡ್ ಸೋಂಕಿಗೆ ಒಳಗಾದ ಕುಟುಂಬವೊಂದು ಸಂಪೂರ್ಣ ಗುಣಮುಖವಾಗಿ ಕೋವಿಡ್ ನಿಂದ ಬಳಲುತ್ತಿರುವ ಸೋಂಕಿತರಿಗೆ ಧೈರ್ಯದಿಂದ ಸೋಂಕು ಗೆಲ್ಲಲು ಮನವಿ ಮಾಡಿಕೊಂಡಿದೆ.

ಕುಂದಾಪುರ ತಾಲೂಕಿನ ಹೊಂಬಾಡಿ ಮಂಡಾಡಿ ಗ್ರಾಮದ ಹೆರಿಯಣ್ಣ ಆಚಾರ್ಯ ,ಗಣಪ್ಪಯ್ಯ ಆಚಾರ್ಯ,ಶಂಕರ ಆಚಾರ್ಯ ಅವರ ಮನೆಯ 19 ಜನ ಸದಸ್ಯರಿಗೆ ಕೋವಿಡ್ ಲಕ್ಷಣ ಕಂಡುಬಂದು ನಂತರದ ಪರೀಕ್ಷೆಯಲ್ಲಿ ಕೋವಿಡ್ ಪಾಸಿಟಿವ್ ಬಂದಿತ್ತು.

ಪಾಸಿಟಿವ್ ಬಂದ ಬಳಿಕ ಹೋಮ್ ಐಸೋಲೇಷನ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಎಲ್ಲಾ 19 ಜನ ಸದಸ್ಯರು ಈಗ ಕೋವಿಡ್ ನಿಂದ ಗುಣಮುಖರಾಗಿದ್ದು,ಅದೆಷ್ಟೋ ಸೋಂಕಿತರಿಗೆ ಧೈರ್ಯದಿಂದ ಕೋವಿಡ್ ಗೆಲ್ಲಲು ಮನವಿ ಮಾಡಿಕೊಂಡಿದ್ದಾರೆ.

- Advertisement -

Related news

error: Content is protected !!