ಅಲಹಾಬಾದ್: ಗೋವುಗಳು ದೇಶದ ಸಂಸ್ಕೃತಿಯ ಒಂದು ಭಾಗ.. ಗೋವುಗಳನ್ನು ದೇಶದ ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಿಸಬೇಕು ಎಂದು ಅಲಹಾಬಾದ್ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಜಸ್ಟೀಸ್ ಶೇಖರ್ ಕುಮಾರ್ ಯಾದವ್ರ ಏಕಸದಸ್ಯ ಪೀಠದಲ್ಲಿ ನಡೆದ ವಿಚಾರಣೆಯೊಂದರಲ್ಲಿ ಈ ಕುರಿತು ಹೇಳಿಕೆ ನೀಡಿದ ಜಡ್ಜ್, ಪಾರ್ಲಿಮೆಂಟ್ ಗೋವುಗಳಿಗೆ ಮೂಲಭೂತ ಹಕ್ಕು ನೀಡುವ ಬಿಲ್ ಒಂದನ್ನು ತರಬೇಕು ಮತ್ತು ಗೋವುಗಳನ್ನು ರಾಷ್ಟ್ರೀಯ ಪ್ರಾಣಿಯೆಂದು ಘೋಷಿಸಬೇಕು. ಅಲ್ಲದೇ ಗೋವುಗಳಿಗೆ ಹಿಂಸೆ ನೀಡುವ ಕುರಿತು ಮಾತನಾಡುವವರ ವಿರುದ್ಧ ಕಠಿಣ ಕಾನೂನೊಂದನ್ನು ತರಬೇಕು ಎಂದಿದ್ದಾರೆ.
ಗೋವುಗಳ ರಕ್ಷಣೆ ಕೇವಲ ಧಾರ್ಮಿಕ ವ್ಯಾಪ್ತಿಗೆ ಸೀಮಿತವಾದುದಲ್ಲ. ಗೋವುಗಳು ದೇಶದ ಸಂಸ್ಕೃತಿ.. ಈ ಸಂಸ್ಕೃತಿಯನ್ನು ದೇಶದ ಪ್ರತಿಯೊಬ್ಬನೂ ಉಳಿಸಬೇಕು. ಯಾವಾಗ ಗೋವುಗಳ ಕಲ್ಯಾಣವಾಗುತ್ತದೋ ಆಗ ದೇಶದ ಕಲ್ಯಾಣವೂ ಆಗುತ್ತದೆ ಎಂದು ಕೋರ್ಟ್ ಹೇಳಿದೆ.
ಗೋಸಂರಕ್ಷಣಾ ಕಾಯ್ದೆಯಡಿ ಆರೋಪಿ ಜಾವೇದ್ ಎಂಬಾತನ ಜಾಮೀನು ಅರ್ಜಿ ವಿಚಾರಣೆ ವೇಳೆ ಕೋರ್ಟ್ ಈ ರೀತಿ ಅಭಿಪ್ರಾಯಪಟ್ಟಿದ್ದು.. ಜಾವೇದ್ಗೆ ಜಾಮೀನು ನೀಡಲು ಕೋರ್ಟ್ ನಿರಾಕರಿಸಿದೆ. ಜಾಮೀನು ನೀಡಿದರೆ ದೊಡ್ಡ ಮಟ್ಟದಲ್ಲಿ ಸಮಾಜದಲ್ಲಿ ಹಿಂಸೆಗೆ ಕಾರಣವಾಗಬಹುದು ಎಂದು ಕೋರ್ಟ್ ಜಾಮೀನಿಗೆ ನಿರಾಕರಿಸಿದೆ.