- Advertisement -
- Advertisement -
ಉಡುಪಿಯ ಗುಂಡಿಬೈಲಿನ ರಸಿಕ ಬಾರ್ ಅಂಡ್ ರೆಸ್ಟೋರೆಂಟ್ ವೊಂದರ ಮ್ಯಾನೇಜರ್ ಹಾಗೂ ಕೆಲಸಗಾರರ ಮೇಲೆ ಕೊಲೆ ಯತ್ನ ಮಾಡಿದ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ಬಾರ್ ನ ಮ್ಯಾನೇಜರ್ ಮಹೇಶ, ಹೆಚ್.ಎನ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಅದರಂತೆ ಆರೋಪಿ ರಾಕೇಶ್ ಎಂಬಾತ ಇತರ ಇಬ್ಬರೊಂದಿಗೆ ಸೇರಿಕೊಂಡು ಮಹೇಶ್ ಹಾಗೂ ಅವರ ಕೆಲಸಗಾರರಾದ ವಾಲ್ಟರ್ ಡಿಸೋಜ ಮತ್ತು ಶರಣಪ್ಪ ಎಂಬುವವರಿಗೆ ಬಿಯರ್ ಬಾಟಲಿಯಿಂದ ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದ ಮೂವರಿಗೂ ಗಾಯವಾಗಿದ್ದು ಉಡುಪಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
- Advertisement -