ವಿಟ್ಲ: ಕಂಬಳಬೆಟ್ಟು ಧರ್ಮನಗರ ಶ್ರೀ ಜಯದುರ್ಗಾ ಪರಮೇಶ್ವರಿ ದೇವಾಸ್ಥಾನದಲ್ಲಿ ಮಿತ್ತೂರು ವೇದಮೂರ್ತಿ ಪುರೋಹಿತ ಗೋಪಾಲಕೃಷ್ಣ ಭಟ್ ಇವರ ನೇತೃತ್ವದಲ್ಲಿ, ಶ್ರೀ ಜಯದುರ್ಗಾಪರಮೇಶ್ವರೀ ದೇವಿಯ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯು ಧರ್ಮನಗರ ಶ್ರೀ ದುರ್ಗಾಮಂದಿರದಲ್ಲಿ ಡಿ.26ರಂದು ನೆರವೇರಲಿದೆ.
ಅದೇ ದಿನ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ವಿವಿಧ ಭಜನಾ ತಂಡಗಳಿಂದ ಅರ್ಧ ಏಕಾಹ ಭಜನೆ ನಡೆಯಲಿದೆ.
ಕಾರ್ಯಕ್ರಮಗಳ ವಿವರ: 26-12-2021ನೇ ಆದಿತ್ಯವಾರ ಬೆಳಿಗ್ಗೆ ಗಂಟೆ 6.51ಕ್ಕೆ : ದೀಪ ಪ್ರಜ್ವಲನೆ – ಅರ್ಧಏಕಾಹ ಭಜನೆ ಪ್ರಾರಂಭ ಬೆಳಿಗ್ಗೆ ಗಂಟೆ 8,00ಕ್ಕೆ- ಗಣಪತಿ ಹವನ ಬೆಳಿಗ್ಗೆ ಗಂಟೆ 9.30ಕ್ಕೆ- ಕಲಶ ಪ್ರತಿಷ್ಠೆ, ನವಕ ಕಲಶಾಭಿಷೇಕ. ಮಧ್ಯಾಹ್ನ ಗಂ.12.30ಕ್ಕೆ- ಮಹಾಮಂಗಳಾರತಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆ. ಸಂಜೆ ಗಂಟೆ 5.00ಕ್ಕೆ- ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಸಂಜೆ ಗಂಟೆ 6.10ಕ್ಕೆ- ಅರ್ಧ ಏಕಾಹ ಭಜನೆ ಮಂಗಳ, ಸಂಜೆ ಗಂಟೆ 7.00ಕ್ಕೆ- ಸಾಮೂಹಿಕ ದುರ್ಗಾ ಪೂಜೆ, ರಾತ್ರಿ ಗಂಟೆ 8.00ಕ್ಕೆ -ರಂಗಪೂಜೆ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.