Monday, June 30, 2025
spot_imgspot_img
spot_imgspot_img

ಉಳ್ಳಾಲ: ಕಮರಿಗೆ ಉರುಳಿದ ಕಾರುಗಳನ್ನು ಹೊತ್ತೊಯ್ಯುತ್ತಿದ್ದ ಕಂಟೈನರ್ ಲಾರಿ

- Advertisement -
- Advertisement -
vtv vitla
vtv vitla
vtv vitla
vtv vitla

ಉಳ್ಳಾಲ: ಕಾರುಗಳನ್ನು ಹೊತ್ತೊಯ್ಯುತ್ತಿದ್ದ ಕಂಟೈನರ್ ಲಾರಿ ಕಮರಿಗೆ ಉರುಳಿರುವ ಘಟನೆ ರಾ.ಹೆ. 66 ರ ತೊಕ್ಕೊಟ್ಟು ಕಾಪಿಕಾಡು ಬಳಿ ನಡೆದಿದೆ. ಘಟನೆಗೆ ಎದುರಿನಲ್ಲಿದ್ದ ಕಾರು ಚಾಲಕ ಕಾರಣ ಎಂಬುದು ಸಿಸಿಟಿವಿಯಲ್ಲಿ ದೊರೆತ ವೀಡಿಯೋದಲ್ಲಿ ಗೊತ್ತಾಗಿದೆ.

vtv vitla

ಕಾಪಿಕಾಡು ಎರಡನೇ ಅಡ್ಡ ರಸ್ತೆ ನಿವಾಸಿ ಆಲ್ಫ್ರೆಡ್ ಗಾಡ್ ಫ್ರೀ ಡಿಸೋಜ ಎಂಬವರು ಕಾರು ಚಲಾಯಿಸುತ್ತಿದ್ದರು. ಕಾಪಿಕಾಡು ಎರಡನೇ ಅಡ್ಡ ರಸ್ತೆ ಬರುತ್ತಿದ್ದಂತೆ ಯಾವುದೇ ಸೂಚನೆ ನೀಡದೆ ಕಾರನ್ನ ತಿರುಗಿಸಿದ್ದಾರೆ. ಇದರಿಂದ ವಿಚಲಿತನಾದ ಹಿಂಬದಿ ಇದ್ದ ಟ್ರಕ್ ಚಾಲಕ ಬಿಹಾರ ಮೂಲದ ರಮೇಶ್ ಕಾರನ್ನ ರಕ್ಷಿಸಲು ಹೋಗಿ ಟ್ರಕ್ಕನ್ನೇ ಕಮರಿಗೆ ಹಾಕಿದ್ದಾನೆ.

ತನ್ನ ಪ್ರಾಣ ರಕ್ಷಿಸಿದ ಚಾಲಕ ರಮೇಶನನ್ನು ಕಾರು ಚಾಲಕ ಆಲ್ಫ್ರೆಡ್ ಏಕ ವಚನದಲ್ಲಿ ನಿಂದಿಸಿ ತನ್ನದೇನೂ ತಪ್ಪಿಲ್ಲವೆಂದು ಬಿಂಬಿಸಿದ್ದಾರೆ. ಅಲ್ಲದೆ, ಸ್ಥಳಕ್ಕೆ ಬಂದ ಟ್ರಾಫಿಕ್ ಪೊಲೀಸರಿಗೂ ಕಾನೂನಿನ ಪಾಠ ಹೇಳಿ ಕೊಡಲು ಮುಂದಾಗಿದ್ದಾರೆ. ಅಷ್ಟರಲ್ಲೇ ಅಪಘಾತವಾದ ದೃಶ್ಯವು ಪಕ್ಕದ ಸಿಮೆಂಟ್ ಅಂಗಡಿಯ ಸಿಸಿ ಟಿವಿ ಫೂಟೇಜಲ್ಲಿ ಲಭಿಸಿದ್ದು ಇದನ್ನ ಕಂಡ ನಂತರ ಜ್ಞಾನೋದಯವಾಗಿದೆ. ಟ್ರಕ್ ಕಮರಿಗೆ ಉರುಳಿದ ಸಂದರ್ಭ ರಸ್ತೆ ಬದಿಯಲ್ಲಿ ಇಬ್ಬರು ಪಾದಚಾರಿಗಳು ನಿಂತಿದ್ದು ಕೂದಲೆಳೆಯ ಅಂತರದಲ್ಲಿ ಅವರು ಪಾರಾಗಿದ್ದಾರೆ.

ಘಟನೆಯಿಂದಾಗಿ ರಾ.ಹೆಯಲ್ಲಿ ವಾಹನ ಸಂಚಾರಕ್ಕೆ ವ್ಯತ್ಯಯ ಉಂಟಾಗಿತ್ತು. ಬಳಿಕ ನಾಗುರಿ ಸಂಚಾರಿ ಠಾಣಾ ಪೊಲೀಸರ ಸಹಕಾರದೊಂದಿಗೆ ಕ್ರೇನ್ ಮೂಲಕ ಕಂಟೈನರ್ ಅನ್ನು ಮೇಲೆತ್ತುವ ಮೂಲಕ ಸುಗಮ ವಾಹನ ಸಂಚಾರಕ್ಕೆ ತೆರವು ಮಾಡಿಕೊಡಲಾಯಿತು. ಮುಂಬೈ ಕಡೆಯಿಂದ ಕಾಸರಗೋಡಿಗೆ ಹುಂಡೈ ಕಾರುಗಳನ್ನು ಸಾಗಾಟ ನಡೆಸುವಾಗ ಘಟನೆ ನಡೆದಿದೆ. ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

- Advertisement -

Related news

error: Content is protected !!