Friday, July 24, 2026
spot_imgspot_img
spot_imgspot_img

ಕರಾವಳಿಯ ತೀರ್ಥ ಕ್ಷೇತ್ರಗಳಿಗೆ ಸಿಎಂ ಭೇಟಿ ; ನಾಡಿನ ಸುಭೀಕ್ಷೆಗೆ ದೇವರಲ್ಲಿ ಪ್ರಾರ್ಥನೆ – ಸಿಎಂ ಬಸವರಾಜ ಬೊಮ್ಮಾಯಿ

- Advertisement -
- Advertisement -

ಸಿಎಂ ಬಸವರಾಜ ಬೊಮ್ಮಾಯಿ ಸದ್ಯ ಮೂರು ದಿನಗಳ ಕರಾವಳಿ ಪ್ರವಾಸದಲ್ಲಿ ಇದ್ದಾರೆ. ವಿವಿಧ ಕಾರ್ಯಕ್ರಮದಲ್ಲಿ ಭಾಗವಹಿಸಿ, ತೀರ್ಥ ಕ್ಷೇತ್ರಗಳಿಗೂ ಭೇಟಿ ನೀಡಿ ದೇವರ ಆಶಿರ್ವಾದ ಪಡೆಯುತ್ತಿದ್ದು, ಆರಂಭದಲ್ಲಿ, ಉಡುಪಿಯ ಕಾಪುವಿನ ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಭೇಟಿ ನೀಡಿ, ದೇವಿಯ ದರ್ಶನ ಪಡೆದರು.

ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮೊಗವೀರ ಸಮುದಾಯಕ್ಕೆ ಬರಪೂರ ಕೊಡುಗೆ ಘೋಷಣೆ, ಮಾಡಿದ್ದಾರೆ. ಮಹಾಲಕ್ಷ್ಮಿ ದೇವಸ್ಥಾನಕ್ಕೆ 5ಕೋಟಿ ಅನುದಾನ ಘೋಷನೆ ಮಾಡಿದರು ಅಲ್ಲದೇ, ಮೊಗವೀರ ಮಕ್ಕಳಿಗೆ ಹಿಂದುಳಿದ ವರ್ಗಗಳ ಹಾಸ್ಟೆಲ್,ಮೀನುಗಾರರಿಗೆ 10 ತಿಂಗಳಿಗೆ ಎರಡು ಲಕ್ಷ ಲೀ. ಸಬ್ಸಿಡಿ ಡೀಸೆಲ್ ಘೋಷಣೆ ಮಾಡಿದರು. ಮಹಿಳೆಯರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡಲು ಬ್ಯಾಂಕ್’ಗಳ ಜೊತೆ ಮಾತುಕತೆ ನಡೆಸುದಾಗಿ ಹೇಳಿ, ನಾನು ಮೊಗವೀರ ಸಮುದಾಯದ ಜೊತೆ ಇದ್ದೇನೆ ಅಂತ ಧೈರ್ಯ ತುಂಬಿದರು. ಮಧ್ಯಾಹ್ನ ಬಳಿಕ, ಡಾ ಬನ್ನಂಜೆ ಗೋವಿಂದಾಚಾರ್ಯ ಸ್ಮಾರಕ ಗ್ರಂಥಾಲಯ ಲೋಕರ್ಪಣೆಗೊಳಿಸಿದರು.

ನಂತರ ಉಡುಪಿಯಲ್ಲಿ ನಿರ್ಮಾಣವಾದ ನೂತನ ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಉದ್ಘಾಟನೆಗೊಳಿಸಿ, ಕೃಷ್ಣ ಮಠಕ್ಕೆ ಭೇಟಿ ನೀಡಿ ಗೋಪಾಲನ ದರ್ಶನ ಪಡೆದು, ಸಗ್ರಿ ವಾಸುಕಿ ಸುಬ್ರಮಣ್ಯ ದೇವಸ್ಥಾನದಲ್ಲಿ ನಾಗಮಂಡಲ ಸೇವೆಯಲ್ಲಿ ಪಾಲ್ಗೊಂಡರು. ನಾಡಿನ ಸುಭೀಕ್ಷೆಗೆ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದ್ದೇನೆ ಅಂತ ಹೇಳಿದರು.

- Advertisement -

Related news

error: Content is protected !!