- Advertisement -
- Advertisement -
ವಿಟ್ಲ: ಕಲ್ಲು ಸಾಗಿಸುತ್ತಿದ್ದ ಲಾರಿಯೊಂದು ರಸ್ತೆಯಲ್ಲಿ ಲಾರಿ ಚಕ್ರ ಮಣ್ಣಿನಲ್ಲಿ ಹೂತು ಅದರಲ್ಲಿದ್ದ ಕಲ್ಲು ನೆಲಕ್ಕೆ ಉರುಳಿದ ಘಟನೆ ನಡೆದಿದೆ. ವಿಪರೀತ ಮಳೆಯಿಂದಾಗಿ ರಸ್ತೆಯ ಬದಿಯಲ್ಲಿ ಮಣ್ಣು ಸಡಿಲಗೊಂಡಿತ್ತು. ಇದರಿಂದಾಗಿ ಭಾರ ತುಂಬಿದ್ದ ಕಲ್ಲು ಸಾಗಟದ ಲಾರಿ ಅಲ್ಲೇ ಹೂತು ಹೋದ ಘಟನೆ ಕುಡ್ತಮುಗೇರು ಬೊಳ್ಳೆಚಾರು ಎಂಬಲ್ಲಿ ನಡೆದಿದೆ.
ಮನೆಯೊಂದಕ್ಕೆ ಕೆಂಪು ಕಲ್ಲು ಸಾಗಿಸುತ್ತಿದ್ದರು ಎನ್ನಲಾಗಿದೆ. ಘಟನೆಯಲ್ಲಿ ಚಾಲಕನಿಗೆ ಸಣ್ಣ ಪುಟ್ಟ ಗಾಯಗಳಾಗಿದೆ ಎಂದು ತಿಳಿದುಬಂದಿದೆ.
- Advertisement -