ಹೊನ್ನಾಳಿ ಚಂದ್ರಶೇಖರ್ ನಿಗೂಢ ಸಾವಿಗೆ ಮತ್ತೊಂದು ತಿರುವು ಸಿಕ್ಕಿದೆ. ಸಾವಿನ ಹಿಂದೆ ಸಲಿಂಗಕಾಮದ ಕರಿನೆರಳು ಇದೆಯೆಂಬ ಆರೋಪ ಕೇಳಿಬಂದಿದೆ. ಮೃತ ಚಂದ್ರಶೇಖರ್ ಅವರ ತಂದೆಯ ಸ್ಪೋಟಕ ಹೇಳಿಕೆ ಪೊಲೀಸ್ ತನಿಖೆಯನ್ನು ಇನ್ನಷ್ಟು ತೀವ್ರಗೊಳಿಸುವಂತೆ ಮಾಡಿದೆ. ಅಷ್ಟು ಮಾತ್ರವಲ್ಲದೆ ಎಂ.ಪಿ ರಮೇಶ್ ಮಗನ ಸ್ನೇಹಿತರ ಮೇಲೆ ಗಂಭೀರ ಆರೋಪ ಮಾಡಿದ್ದಾರೆ.

ಬಲವಂತವಾಗಿ ಸಲಿಂಗಕಾಮಕ್ಕೆ ಬಳಸಿಕೊಂಡ್ರಾ..? ಮೃತ ಚಂದ್ರಶೇಖರ್ ತಂದೆಯಿಂದ ಸ್ಪೋಟಕ ಹೇಳಿಕೆ
ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ರಮೇಶ್, ನನ್ನ ಮಗನ ಮರ್ಮಾಂಗ ಊದಿಕೊಂಡಿತ್ತು, ಅದಕ್ಕೆ ಇಂಜೆಕ್ಷನ್ ಮಾಡಿದ್ದಾರೆ. ನನ್ನ ಮಗನಿಗೆ ಚಿತ್ರಹಿಂಸೆ ಕೊಟ್ಟು ಕೊಲೆ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ನನ್ನ ಮಗನನ್ನು ಪ್ರೀ ಪ್ಲಾನ್ ಮಾಡಿ ಕೊಲೆ ಮಾಡಿದ್ದಾರೆ. ಆದರೆ ತನಿಖೆ ನಡೆಸುತ್ತಿದ್ದ ಪೊಲೀಸರು ಶುದ್ಧ ಸುಳ್ಳು ಹೇಳುತ್ತಿದ್ದಾರೆ. ನನ್ನ ಮಗನದ್ದು ವ್ಯವಸ್ಥಿತವಾಗಿ ಕೊಲೆ ಆಗಿದೆ ಎಂದು ಆರೋಪಿಸಿದರು.

ಮನೆಯಿಂದ ಹೋಗುವಾಗ ಒಳ ಉಡುಪು ಇತ್ತು. ಆದರೆ ಮರಣೋತ್ತರ ಪರೀಕ್ಷೆ ಮಾಡುವಾಗ ಒಳ ಉಡುಪು ಇರಲಿಲ್ಲ. ಅಲ್ಲದೆ ಆತನ ಮರ್ಮಾಂಗ ಬಾತುಕೊಂಡಿತ್ತು, ಅದಕ್ಕೆ ಇಂಜೆಕ್ಷನ್ ಮಾಡಿದ್ದಾರೆ. ಕಾರ್ ಹಿಂಭಾಗದ ಇಂಡಿಕೇಟರ್ ಸಹ ಒಡೆಯದೇ ಕೇವಲ ಹಿಂಭಾಗ ಮಾತ್ರ ಗುದ್ದಿರುವ ಹಾಗೇ ಕಾರು ಸಿಕ್ಕಿದೆ. ದೇಹದ ಬೇರೆ ಕಡೆ ಚಿತ್ರ ಹಿಂಸೆ ಕೊಟ್ಟು ಕೊಲೆ ಮಾಡಿ ಹಾಕಿದ್ದಾರೆ. ಕೈ ಕಾಲಿಗೆ ಬಟ್ಟೆ ಅಥವಾ ಹಗ್ಗ ಕಟ್ಟಿದ್ದಾರೆ. ಹೊಡೆದು ಸೀಟಿನಲ್ಲಿ ಬಲವಂತವಾಗಿ ಇರಿಸಲಾಗಿದೆ.

ಗೌರಿಗದ್ದೆ ಗುರೂಜಿ ಹೇಳಿಕೆಗೂ ಚಂದ್ರು ಸ್ನೇಹಿತ ಕಿರಣ್ ಹೇಳಿಕೆಗೂ ಸಾಕಷ್ಟು ಗೊಂದಲ ಇದೆ. ಕಿರಣ್ ನೋಡಿದರೆ ಕ್ರೇಟಾ ಕಾರ್ ನಲ್ಲಿ ಆಶ್ರಮಕ್ಕೆ ಹೋಗಿದ್ದೆವು ಎಂದು ಹೇಳುತ್ತಾರೆ. ಗುರೂಜಿ ಮಾತ್ರ ಬೇರೆ ಕಾರಿನಲ್ಲಿ ಬಂದಿದ್ದರು ಎಂದು ಹೇಳುತ್ತಾರೆ. ಹೀಗೆ ಹಲವು ಗೊಂದಲದ ಹೇಳಿಕೆಗಳನ್ನು ಇಬ್ಬರು ಹೇಳುತ್ತಿದ್ದಾರೆ. ಪೊಲೀಸರು ಸೂಕ್ತ ರೀತಿಯಲ್ಲಿ ತನಿಖೆ ನಡೆಸುತ್ತಿಲ್ಲ ಎಂದರು.

