Monday, June 30, 2025
spot_imgspot_img
spot_imgspot_img

ಡಾ.ಕೃಷ್ಣಮೂರ್ತಿ ನಿಗೂಢ ಸಾವು ಪ್ರಕರಣದಲ್ಲಿ ಬಂಧಿತ ಆರೋಪಿಗಳು ಪೊಲೀಸ್‌ ಕಸ್ಟಡಿ

- Advertisement -
- Advertisement -

ಬದಿಯಡ್ಕ: ಇಲ್ಲಿನ ಖ್ಯಾತ ದಂತ ವೈದ್ಯ ಡಾ.ಕೃಷ್ಣಮೂರ್ತಿ ಸರ್ಪಂಗಳ ಅವರ ನಿಗೂಢ ಸಾವು ಪ್ರಕರಣದಲ್ಲಿ ಬಂಧಿತರಾದ ಐದು ಮಂದಿ ಆರೋಪಿಗಳನ್ನು ನಿನ್ನೆ ನ್ಯಾಯಾಲಯದಲ್ಲಿ ಹಾಜರಿಪಡಿಸಲಾಗಿದ್ದು, ಆರೋಪಿಗಳು ಪೊಲೀಸ್‌ ಕಸ್ಟಡಿಯಲ್ಲಿದ್ದಾರೆ.

ಮುಸ್ಲಿಂ ಲೀಗ್ ಕುಂಬ್ಡಾಜೆ ಪಂಚಾಯತ್‌ ಕಾರ್ಯದರ್ಶಿ ಹಾಗೂ ಅಡಿಕೆ ವ್ಯಾಪಾರಿ ಅಲಿ ತುಪ್ಪಕಲ್ಲು, ಮುಸ್ಲಿಂ ಲೀಗ್ ಬದಿಯಡ್ಕ ಪಂಚಾಯತು ಸಮಿತಿ ಪದಾಧಿಕಾರಿ, ಪಂಚಾಯತು ಮಾಜಿ ಸದಸ್ಯ ಅನ್ವರ್ ಯಾನೆ ಮುಹಮ್ಮದ್ ಹನೀಫ, ಇತರರಾದ ಕುಂಬ್ಡಾಜೆ ನಿವಾಸಿ ಅಶ್ರಫ್, ಅನ್ನಡ್ಕ ನಿವಾಸಿ ಮುಹಮ್ಮದ್ ಶಿಹಾಬುದ್ದೀನ್, ವಿದ್ಯಾಗಿರಿ ಮುನಿಯೂರು ನಿವಾಸಿ ಉಮರುಲ್ ಫಾರೂಕ್ ಎಂಬವರನ್ನು ರಿಮಾಂಡ್ ವಿಧಿಸಲಾಗಿದೆ.

ಡಾ.ಕೃಷ್ಣಮೂರ್ತಿ ಸರ್ಪಂಗಳ

ಇವರ ಹೆಸರಿನಲ್ಲಿ ಆತ್ಮಹತ್ಯೆಗೆ ಪ್ರೇರಣೆ, ಬೆದರಿಸಿ ಹಣ ಯಾಚನೆ ಸಹಿತ ವಿವಿದ ಕಾಯ್ದೆಗಳನ್ನು ಬಳಸಲಾಗಿದೆ. ಈ ಪ್ರಕರಣದ ತನಿಖೆ ಮುಂದುವರಿಯುತ್ತಿದೆಯೆಂದು ಬದಿಯಡ್ಕ ಪೊಲೀಸರು ಹೇಳಿದ್ದಾರೆ. ಇದೇ ವೇಳೆ ಈ ಪ್ರಕರಣದ ತನಿಖೆಯನ್ನು ಕರ್ನಾಟಕ ಪೊಲೀಸರು ನಡೆಸಬೇಕು ಎಂಬ ಒತ್ತಾಯವೂ ವ್ಯಾಪಕಗೊಂಡಿದೆ.

- Advertisement -

Related news

error: Content is protected !!