ಹೈದರಾಬಾದ್ : ದಾಖಲೆಯಿಲ್ಲದ ಬರೋಬ್ಬರಿ 3.75ಕೋಟಿ ಹೈದರಾಬಾದಿನಿಂದ ಮಹಾರಾಷ್ಟ್ರದ ಸೋಲಾಪುರಕ್ಕೆ ಸಾಗಿಸುತ್ತಿದ್ದ ವೇಳೆ ಹೈದರಾಬಾದಿನ ಪೊಲೀಸರು ವಶಪಡಿಸಿಕೊಂಡಿದ್ದಾರೆ .ಮತ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಹವಾಲಾ ಹಣವನ್ನು ಸಾಗಿಸುತ್ತಿದ್ದ ಖಚಿತ ಮಾಹಿತಿ ಪಡೆದ ಹೈದರಾಬಾದ್ ಪೊಲೀಸರು ಬಂಜಾರ ಹಿಲ್ಸ್ ಬಳಿ ನಾಲ್ವರು ಆರೋಪಿಗಳ ಸಹಿತ ಎರಡು ಕಾರು ಜೊತೆಗೆ 3.75ಕೋಟಿ ರೂಪಾಯಿಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಆರೋಪಿಗಳನ್ನು ಈಶ್ವರ್ ದಿಲೀಪ್ ಸೋಲಂಕಿ(29), ಹರೀಶ್ ಭಾಯ್ ಪಟೇಲ್(35), ಅಜಿತ್ ಸಿಂಗ್ (34) ಹಾಗೂ ರಾಥೋಡ್ ನಾನಕ್ ಸಿಂಗ್ ನಾತುಬಾ(42) ಎಂದು ಗುರುತಿಸಲಾಗಿದೆ.
Hyderabad: Four persons held in possession of Rs 3.75 crores of unaccounted cash, today. Further investigation underway. #Telangana pic.twitter.com/NJnVmeg2UX
— ANI (@ANI) September 15, 2020
ಆರೋಪಿಗಳನ್ನು ತನಿಖೆ ನಡೆಸಿದಾಗ ಮುಂಬೈ ಮೂಲಕ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವುದಾಗಿ ತಿಳಿಸಿದ್ದಾರೆ. ಕಂಪೆನಿಯ ಮಾಲಕರು ಹೈದರಾಬಾದ್ ಮೂಲದವರಾಗಿದ್ದು ಹೈದರಾಬಾದಿನಲ್ಲೂ ಶಾಖಾ ಕಚೇರಿಯನ್ನು ಹೊಂದಿರುವುದಾಗಿ ತಿಳಿಸಿದ್ದಾರೆ, ಹಾಗಾಗಿ ಹಣವನ್ನು ಮಹಾರಾಷ್ಟ್ರದ ಸೋಲಾಪುರಕ್ಕೆ ಸಾಗಿಸುತ್ತಿದ್ದುದಾಗಿ ಹೇಳಿದ್ದಾರೆ. ವಶಕ್ಕೆ ಪಡೆದುಕೊಂಡ 3,75,30,000 ರೂ. ಹಣವನ್ನು ಆದಾಯ ತೆರಿಗೆ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ. ತನಿಖೆ ನಡೆಯುತ್ತಿದೆ.