- Advertisement -
- Advertisement -


ಕೊಡಗು: ಹುಲಿ ದಾಳಿ ನಡೆಸಿ ಕಾರ್ಮಿಕನೋರ್ವನನ್ನು ಕೊಂದ ಘಟನೆ ಬಾಡಗ ಗ್ರಾಮದ ಲೈನ್ ಮನೆ ಬಳಿ ನಡೆದಿದೆ. ಈ ಪ್ರದೇಶ ವ್ಯಾಪ್ತಿಯಲ್ಲಿ ಕಳೆದ 24 ಗಂಟೆಗಳಲ್ಲಿ ಇಬ್ಬರು ಹುಲಿ ದಾಳಿಗೆ ಬಲಿಯಾಗಿದ್ದು, ಗ್ರಾಮಸ್ಥರು ತೀವ್ರ ಭಯಭೀತರಾಗಿದ್ದಾರೆ.
ರವಿವಾರ ಸಂಜೆ 12 ವರ್ಷದ ಬಾಲಕನೊಬ್ಬನನ್ನು ಹುಲಿ ಬಲಿ ಪಡೆದಿತ್ತು.

ಸೋಮವಾರ ಬೆಳಗ್ಗೆ ಕೃಷಿ ಕಾರ್ಮಿಕ ರಾಜು (75) ಹುಲಿ ದಾಳಿಗೊಳಗಾಗಿ ಮೃತಪಟ್ಟವರು. ಬೆಳಗ್ಗೆ ತನ್ನ ಮನೆಯಿಂದ ಹೊರ ಬಂದಾಗ ಕಾಫಿ ತೋಟದಲ್ಲಿ ಅಡಗಿದ್ದ ಹುಲಿ ದಿಢೀರನೇ ದಾಳಿ ನಡೆಸಿ, ತೀವ್ರವಾಗಿ ಗಾಯಗೊಳಿಸಿದೆ. ಇದರಿಂದ ರಾಜು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.
ರವಿವಾರ ಸಂಜೆ ದಕ್ಷಿಣ ಕೊಡಗಿನ ಕುಟ್ಟಿದ ಪಾಲೇರಿ ಎಂಬಲ್ಲಿ ಕಾಫಿ ತೋಟದಲ್ಲಿದ್ದ ಪಂಚವಳ್ಳಿ ಮೂಲದ ಚೇತನ್ (12) ಎಂಬ ಬಾಲಕನ ಮೇಲೆ ಹುಲಿ ಎರಗಿ ಕೊಂದು ಹಾಕಿತ್ತು.
ಇದೀಗ ಇನ್ನೋರ್ವನನ್ನು ಹುಲಿ ಕೊಂದು ಹಾಕಿದೆ. ಹುಲಿ ಮನುಷ್ಯರನ್ನು ಬಲಿ ಪಡೆಯುತ್ತಿರುವ ಹಿನ್ನಲೆ ಆಕ್ರೋಶಗೊಂಡಿರುವ ಗ್ರಾಮಸ್ಥರರು ಪ್ರತಿಭಟನೆಗೆ ಮುಂದಾಗಿದ್ದಾರೆ.
- Advertisement -