Saturday, June 28, 2025
spot_imgspot_img
spot_imgspot_img

ಉಪ್ಪಿನಂಗಡಿ : ಮೂರು ಕೋಟಿ ರೂ. ಅನುದಾನದಡಿ ತಡೆಗೋಡೆ ಕಾಮಗಾರಿಗೆ ಶಂಕು ಸ್ಥಾಪನೆ

- Advertisement -
- Advertisement -

ಉಪ್ಪಿನಂಗಡಿ : ಸಣ್ಣ ನೀರಾವರಿ ಇಲಾಖೆಯಿಂದ ಮಳೆ ಹಾನಿ ಅನುದಾನದಡಿ ಎರಡು ಕೋಟಿ ರೂ. ವೆಚ್ಚದಲ್ಲಿ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನ ಬಳಿ ಕುಮಾರಧಾರ ನದಿಗೆ ತಡೆಗೋಡೆ ರಚನೆ ಹಾಗೂ ಒಂದು ಕೋಟಿ ರೂ.ವೆಚ್ಚದಲ್ಲಿ ಉಪ್ಪಿನಂಗಡಿಯ ಸಿಎ ಬ್ಯಾಂಕ್ ಬಳಿಯಲ್ಲಿ ನೇತ್ರಾವತಿ ನದಿಗೆ ತಡೆಗೋಡೆ ರಚನೆ ಕಾಮಗಾರಿಯ ಶಂಕು ಸ್ಥಾಪನೆಯನ್ನು ಶಾಸಕ ಸಂಜೀವ ಮಠಂದೂರು ನೆರವೇರಿಸಿದರು.

ಈ ಸಂದರ್ಭದಲ್ಲಿ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕರುಣಾಕರ ಸುವರ್ಣ, ಉಪ್ಪಿನಂಗಡಿ ಸಿಎ ಬ್ಯಾಂಕ್‌ ಅಧ್ಯಕ್ಷ ಕೆ.ವಿ, ಪ್ರಸಾದ, ಉಪಾಧ್ಯಕ್ಷ ಸುನೀಲ್‌ ಕುಮಾರ್ ದಡ್ಡು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕ್ಲೇರಿ ವೇಗಸ್, ಪ್ರಮುಖರಾದ ಜಯಂತ ಪೊರೋಳಿ, ಸುಂದರ ಗೌಡ, ಚಂದಪ್ಪ ಮೂಲ್ಯ , ರಾಮಚಂದ್ರ ಮಣಿಯಾಣಿ, ಡಾ. ಕೈಲಾರು ರಾಜಗೋಪಾಲ ಭಟ್, ವಿಶ್ವನಾಥ ಶೆಟ್ಟಿ ಕಂಗ್ವೆ , ಹರೀಶ್ ನಾಯಕ್ ನಟ್ಟಿಬೈಲ್, ಸಂತೋಷ್ ಕುಮಾರ್ ಪಂರ್ದಾಜೆ, ಮುಕುಂದ ಬಜತ್ತೂರು, ಸುರೇಶ್ ಅತ್ರೆಮಜಲು, ಧನಂಜಯ ನಟ್ಟಿಬೈಲು, ಅಝೀಝ್ ಬಸ್ತಿಕ್ಕಾರ್‍ , ಪ್ರಶಾಂತ್ ನಕ್ಕಿಲಾಡಿ, ಸದಾನಂದ ನೆಕ್ಕಿಲಾಡಿ, ಯತೀಶ್ ಶೆಟ್ಟಿ , ಸುವ್ಯ , ಎನ್. ಉಮೇಶ್ ಶಣೈ, ಚಂದ್ರಿಕಾ ಭಟ್, ಜಗದೀಶ ರಾವ್ ಮಣಿಕ್ಕಳ, ಯಶವಂತ ಜಿ., ಪ್ರಕಾಶ್ ಶೆಟ್ಟಿ ಬೆಳ್ಳಿಪ್ಪಾಡಿ, ಗುತ್ತಿಗೆದಾರರಾದ ಪ್ರಭಾಕರ ಶೆಟ್ಟಿ , ಫೈಝಲ್, ಇಲಾಖೆಯ ಎಂಜಿನಿಯರ್ ಆದ ವಿಷ್ಣು ಕಾಮತ್, ರಾಕೇಶ್ ಕುಂದರ್, ಪ್ರಸನ್ನ ಮತ್ತಿತರರು ಉಪಸ್ಥಿತರಿದ್ದರು.

- Advertisement -

Related news

error: Content is protected !!