- Advertisement -
- Advertisement -
ಊರ ಜಾತ್ರೆಗೆ ಸಿದ್ಧತೆ ನಡೆಸುವ ವೇಳೆ ಗಲಾಟೆ ನಡೆದು ಯುವಕನನ್ನು ಕೊಲೆ ಮಾಡಿದ ಘಟನೆ ಬೆಂಗಳೂರಿನ ಲಿಂಗರಾಜಪುರ ದ ಬಳಿ ನಡೆದಿದೆ.
ಪ್ರವೀಣ್, ಮೃತ ರ್ದುದೈವಿ. ನಿನ್ನೆ ರಾತ್ರಿ ಮದ್ಯದ ಅಮಲಿನಲ್ಲಿ ಪ್ರವೀಣ್, ಸುಂದರ್ ಮಧ್ಯೆ ಗಲಾಟೆ ನಡದಿದೆ. ಊರ ಜಾತ್ರೆ ಹಿನ್ನಲೆ ಲಿಂಗರಾಜಪುರ ಬಳಿ ಮೃತ ಪ್ರವೀಣ್ ಡಿಜೆ ಬಾಕ್ಸ್ಗಳನ್ನು ಹಾಕಲು ಹೋಗಿದ್ದ. ಈ ವೇಳೆ ಪ್ರವೀಣ್ ಅಶ್ಲೀಲವಾಗಿ ಬೈದು ಸುಂದರ್ಗೆ ಹೊಡೆದಿದ್ದ. ಇದರಿಂದ ಕೋಪಗೊಂಡ ಸುಂದರ್ ಕೂಡ ಹೆಲ್ಮೆಟ್ನಿಂದ ಪ್ರವೀಣ್ ಮೇಲೆ ಹಲ್ಲೆ ನಡೆಸಿದ್ದನು. ಇದರಿಂದ ತೀವ್ರ ಗಾಯಗೊಂಡಿದ್ದ ಪ್ರವೀಣ್ನನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆಯೇ ಸಾವನ್ನಪ್ಪಿದ್ದಾನೆ.
ಆರೋಪಿಗಳು ಮತ್ತು ಕೊಲೆಯಾದವನು ಎಲ್ಲರೂ ಪರಿಚಿತರು ಎನ್ನಲಾಗಿದೆ. ವೈಯುಕ್ತಿಕ ದ್ವೇಷ ಹಿನ್ನಲೆ ಈ ಕೃತ್ಯ ಎಸಗಲಾಗಿದೆ ಎನ್ನಲಾಗಿದ್ದು,
ಈ ಕುರಿತು ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
- Advertisement -