Thursday, May 2, 2024
spot_imgspot_img
spot_imgspot_img

ಊರ ಜಾತ್ರೆ ಸಿದ್ಧತೆ ವೇಳೆ ಗಲಾಟೆ; ಪರಿಚಿತರಿಂದಲೇ ಯುವಕನ ಕೊಲೆ

- Advertisement -G L Acharya panikkar
- Advertisement -

ಊರ ಜಾತ್ರೆಗೆ ಸಿದ್ಧತೆ ನಡೆಸುವ ವೇಳೆ ಗಲಾಟೆ ನಡೆದು ಯುವಕನನ್ನು ಕೊಲೆ ಮಾಡಿದ ಘಟನೆ ಬೆಂಗಳೂರಿನ ಲಿಂಗರಾಜಪುರ ದ ಬಳಿ ನಡೆದಿದೆ.

ಪ್ರವೀಣ್, ಮೃತ ರ್ದುದೈವಿ. ನಿನ್ನೆ ರಾತ್ರಿ ಮದ್ಯದ ಅಮಲಿನಲ್ಲಿ ಪ್ರವೀಣ್, ಸುಂದರ್ ಮಧ್ಯೆ ಗಲಾಟೆ ನಡದಿದೆ. ಊರ ಜಾತ್ರೆ ಹಿನ್ನಲೆ ಲಿಂಗರಾಜಪುರ ಬಳಿ ಮೃತ ಪ್ರವೀಣ್​ ಡಿಜೆ ಬಾಕ್ಸ್​ಗಳನ್ನು ಹಾಕಲು ಹೋಗಿದ್ದ. ಈ ವೇಳೆ ಪ್ರವೀಣ್ ಅಶ್ಲೀಲವಾಗಿ ಬೈದು ಸುಂದರ್‌ಗೆ ಹೊಡೆದಿದ್ದ. ಇದರಿಂದ ಕೋಪಗೊಂಡ ಸುಂದರ್​ ಕೂಡ ಹೆಲ್ಮೆಟ್‌ನಿಂದ ಪ್ರವೀಣ್‌ ಮೇಲೆ ಹಲ್ಲೆ ನಡೆಸಿದ್ದನು. ಇದರಿಂದ ತೀವ್ರ ಗಾಯಗೊಂಡಿದ್ದ ಪ್ರವೀಣ್​ನನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆಯೇ ಸಾವನ್ನಪ್ಪಿದ್ದಾನೆ.

ಆರೋಪಿಗಳು ಮತ್ತು ಕೊಲೆಯಾದವನು ಎಲ್ಲರೂ ಪರಿಚಿತರು ಎನ್ನಲಾಗಿದೆ. ವೈಯುಕ್ತಿಕ ದ್ವೇಷ ಹಿನ್ನಲೆ ಈ ಕೃತ್ಯ ಎಸಗಲಾಗಿದೆ ಎನ್ನಲಾಗಿದ್ದು,
ಈ ಕುರಿತು ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

- Advertisement -

Related news

error: Content is protected !!