- Advertisement -
- Advertisement -
ಪುತ್ತೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ ಕಣಕ್ಕಿಳಿಲಿದ್ದಾರೆ. ನಿನ್ನೆಯಷ್ಟೇ ಟಿಕೆಟ್ ಘೋಷಣೆಯಾಗಿದ್ದು ಇಂದು ಆಶಾ ತಿಮ್ಮಪ್ಪ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.
ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ ಬಿಜೆಪಿ ಮುಖಂಡರ ಅನುಪಸ್ಥಿತಿಯಲ್ಲಿ ದೇಗುಲಕ್ಕೆ ಭೇಟಿ ನೀಡಿದ್ದಾರೆ. “ಭಾಜಪಾ ಮುಖಂಡರಿಗೆ ಆಶಾ ತಿಮ್ಮಪ್ಪ ಗೌಡ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಮನಸ್ಸಿಲ್ಲ. ಹೀಗಾಗಿ ಮುಖಂಡರು ಬಂದಿಲ್ಲ. ಮಾಮೂಲಿಯಂತೆ ಅಭ್ಯರ್ಥಿಗಳು ಘೋಷಣೆಯಾದಾಗ ಕಾರ್ಯಕರ್ತರು, ಬಿಜೆಪಿ ಮುಖಂಡರಲ್ಲಿ ಸಂತಸ ಎದ್ದು ಕಾಣುತ್ತದೆ. ಆದರೆ ಇದು ಜಾತಿ ರಾಜಕೀಯ. ಪಕ್ಷದ ಒಳಗೊಳಗೆ ಅಸಮಧಾನ ಇದೆ ಹೀಗಾಗಿಯೇ ದೇಗುಲ ದರ್ಶನ ಮಾಡುವಾಗ ಯಾರೂ ಬಂದಿಲ್ಲ” ಎಂಬ ಮಾತುಗಳು ಸಾರ್ವಜನಿಕ ವಲಯದಿಂದ ಕೇಳಿಬಂದಿದೆ.
- Advertisement -