Saturday, June 28, 2025
spot_imgspot_img
spot_imgspot_img

ಕೆರೆಯಲ್ಲಿ ಮುಳುಗಿ ಮಕ್ಕಳಿಬ್ಬರು ದಾರುಣ ಸಾವು

- Advertisement -
- Advertisement -

ತಮಿಳುನಾಡು: ಇಲ್ಲಿನ ಕೃಷ್ಣಗಿರಿಯ ಬೋಚಂಪಳ್ಳಿ ಸಮೀಪದ ಮತ್ತೂರು ಬಳಿ ಮಕ್ಕಳಿಬ್ಬರು ಕೆರೆಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಭುವನಾ ಹಾಗೂ ವಿಘ್ನೇಶ್ ಮೃತ ದುರ್ದೈವಿಗಳಾಗಿದ್ದಾರೆ.

ಮನೆಗೆ ಸೌದೆ ತರುವ ಸಲುವಾಗಿ ತಾಯಿಯೊಂದಿಗೆ ಭುವನಾ ಹಾಗೂ ವಿಘ್ನೇಶ್‌ ಹೋಗಿದ್ದರು. ಕೆರೆ ಸುತ್ತಮುತ್ತ ಬಿದ್ದಿದ್ದ ಸೌದೆ ತೆಗೆದುಕೊಳ್ಳುವಾಗ ನೀರಿನ ಬಳಿ ಬಂದಿದ್ದರು. ಈ ವೇಳೆ ಕೆರೆಯಲ್ಲಿ ಆಟವಾಡಲು ಅಣ್ಣ, ತಂಗಿ ಹೋಗಿದ್ದು, ನೀರು ಜಾಸ್ತಿ ಇದ್ದ ಕಾರಣ ಹೊರಬರಲು ಆಗದೆ ಮುಳುಗಿ ಮೃತಪಟ್ಟಿದ್ದಾರೆ.

ಇತ್ತ ಮಕ್ಕಳು ಕಾಣದೆ ಇದ್ದಾಗ ಆತಂಕಕೊಂಡ ತಾಯಿ ಸುತ್ತಮುತ್ತಲು ಹುಡುಕಾಟ ನಡೆಸಿದಾಗ, ಕೆರೆಯ ಬಳಿ ಮಕ್ಕಳ ಚಪ್ಪಲಿ, ಬಟ್ಟೆ ಇರುವುದನ್ನು ಕಂಡಿದ್ದಾರೆ. ವಿಷಯ ಸ್ಥಳೀಯರಿಗೂ ಗೊತ್ತಾಗಿದ್ದು, ಕೂಡಲೆ ಅಗ್ನಿಶಾಮಕ ದಳ ಸಿಬ್ಬಂದಿಗೆ ಮಾಹಿತಿ ನೀಡಿದ್ದು, ಸುಮಾರು ಮೂರು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಮಕ್ಕಳಿಬ್ಬರ ಮೃತದೇಹವನ್ನು ಹೊರತೆಗೆಯಲಾಗಿದೆ.

ಮಕ್ಕಳ ಮೃತದೇಹ ಕಂಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!