ಕಂಬಳಬೆಟ್ಟು: ಜಯದುರ್ಗಾಪರಮೇಶ್ವರಿ ಭಜನಾ ಸಮಿತಿ, ಹಾಗೂ ಗ್ರಾಮ ವಿಕಾಸ ಸಮಿತಿ ಇಡ್ಕಿದು ಸಹಯೋಗದಲ್ಲಿ ಕಂಬಳಬೆಟ್ಟು ಧರ್ಮನಗರದ ಮಂದಿರದಲ್ಲಿ ನಡೆಯುತ್ತಿರುವ ಚೈತ್ರ ಶಿಬಿರ ಸಮಾರೋಪಗೊಳ್ಳಲಿದೆ.
ಸಮಾರೋಪ ಸಮಾರಂಭ ಬೆಳಿಗ್ಗೆ ಘಂಟೆ 9.30 ಕ್ಕೆ ದೀಪ ಪೂಜನ ಕಾರ್ಯಕ್ರಮದಿಂದ ಆರಂಭಗೊಳ್ಳಲಿದೆ. ಶಿಬಿರದ ಎಲ್ಲಾ ಮಕ್ಕಳು ತಮ್ಮ ತಾಯಿಯ ಜತೆಯಲ್ಲಿ ಕುಳಿತು ದೀಪ ಪೂಜೆ ನಡೆಯಲಿದೆ. ಯೋಗಚಾರ್ಯ ಪುಂಡರಿಕಾಕ್ಷ ಬೆಳ್ಳೂರು ಇವರ ಮಾರ್ಗದರ್ಶನದಲ್ಲಿ ಈ ದೀಪ ಪೂಜೆ ನಡೆಯಲಿದೆ. ನಂತರ 10.30 ರಿಂದ ಚೈತ್ರ ಶಿಬಿರದ ಮಕ್ಕಳಿಂದ ಶ್ರೀ ದೇವಿ ಲೀಲೆ ತಾಳಮದ್ದಳೆ ನಡೆಯಲಿದೆ.
ನಂತರ ಯೋಗ ಪ್ರದರ್ಶನ, ನಂತರ ಮಕ್ಕಳ ರಾಜ್ಯ ಎಂಬ ಕಿರು ನಾಟಕ ಇರುವುದು. ನಂತರ ಬಹುಮಾನ ವಿತರಣೆ ನಡೆದು ಸಮಾರೋಪ ಭಾಷಣ ಇರುವುದು.
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿ ಗಳಾಗಿ ಸುಬ್ರಾಯ ಪೈ ಉದ್ಯಮಿಗಳು ವಿಟ್ಲ, ಹಾಗೂ ಮಂಗಳೂರು ವಿಭಾಗದ ಗ್ರಾಮವಿಕಾಸದ ಸಂಯೋಜಕರು ಜಿತೇಂದ್ರ ಪ್ರತಾಪನಗರ ಇವರು ಭಾಗವಹಿಸಲಿದ್ದಾರೆ.
ಚೈತ್ರ ಶಿಬಿರಕ್ಕೆ ಬಂದ ಎಲ್ಲಾ ಮಕ್ಕಳ ಮನೆಯರು ಹಾಗೂ ಊರಿನ ಎಲ್ಲಾ ಬಂದುಗಳು ಭಾಗವಹಿಸಬೇಕಾಗಿ ವಿನಂತಿ.