Friday, May 17, 2024
spot_imgspot_img
spot_imgspot_img

ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಕಾರು; ಚಾಲಕ ಮೃತ್ಯು..!

- Advertisement -G L Acharya panikkar
- Advertisement -

ನಿಯಂತ್ರಣ ತಪ್ಪಿ ಓಡಿದ ಕಾರು ಸರಣಿ ಅಪಘಾತಕ್ಕೆ ಈಡಾಗಿ ಯುವಕನೊಬ್ಬ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬೆಂಗಳೂರಿನ ಬಾಣಸವಾಡಿ ಸಮೀಪದ ಸಿಎಂಆರ್ ರೋಡ್ ನಲ್ಲಿ ನಡೆದಿದೆ.

ಮೃತಪಟ್ಟ ಯುವಕ ಮೆಲ್ವಿನ್ ಜೋಸ್ವಾ(25) ಎಂದು ಗುರುತಿಸಲಾಗಿದೆ.

ಜೋಸ್ವಾ ಮಧ್ಯರಾತ್ರಿ ಚಲಾಯಿಸಿಕೊಂಡು ಹೊರಟಿದ್ದ ಕಾರು ನಿಯಂತ್ರಣ ತಪ್ಪಿ ಮೊದಲು ಮರಕ್ಕೆ ಡಿಕ್ಕಿ ಹೊಡೆದಿತ್ತು. ಬಳಿಕ ಮರದ ಕೆಳಗೆ ನಿಂತಿದ್ದ ಕಾರು ಹಾಗೂ ಕಾಂಪೌಂಡ್‌ಗೆ ಡಿಕ್ಕಿ ಹೊಡೆದಿದೆ. ಈ ಹಂತದಲ್ಲಿ ತೀವ್ರ ಗಾಯಗೊಂಡು ಚಾಲಕ ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ. ಬಾಣಸವಾಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪಘಾತ ಸಂಭವಿಸಲು ಕಾರಣವೇನು? ಕುಡಿತದ ಮತ್ತಿನಲ್ಲಿದ್ದರೇ? ನಿದ್ದೆಯ ಮಂಪರೇ? ಅಥವಾ ವಾಹನದಲ್ಲಿ ಏನಾದರೂ ಸಮಸ್ಯೆ ಆಯಿತೇ ಎನ್ನುವ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

- Advertisement -

Related news

error: Content is protected !!