- Advertisement -
- Advertisement -
ಚಾಕಲೇಟ್ ಎಂಬ ಆಸೆಯಲ್ಲಿ ಕೈಗೆ ಸಿಕ್ಕ ಮಾತ್ರೆಯನ್ನು ತಿಂದಿದ್ದ ಮಗು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ ಘಟನೆ ಚಿತ್ರದುರ್ಗ ಜಿಲ್ಲೆಯ ಕಡಬನಕಟ್ಟೆ ಗ್ರಾಮದಲ್ಲಿ ನಡೆದಿದೆ.
ಮೃತಪಟ್ಟ ಮಗು ಋತ್ವಿಕ್ (4) ಎಂದು ಗುರುತಿಸಲಾಗಿದೆ.
ಚಾಕಲೇಟ್ ಎಂದು ಮಾತ್ರೆಗಳನ್ನು ನುಂಗಿದ ಬಾಲಕ ತೀವ್ರ ಅಸ್ವಸ್ಥಗೊಂಡಿದ್ದು ಆತನನ್ನ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಕರೆತರಲಾಗಿತ್ತು.ಆದರೆ ಚಿಕಿತ್ಸೆ ಫಲಿಸದೇ ಮಗು ಸಾವನ್ನಪ್ಪಿದೆ. ಋತ್ವಿಕ್ ತಿಪ್ಪೆಸ್ವಾಮಿ ಎಂಬುವವರ ಪುತ್ರನಾಗಿದ್ದು , ತಂದೆಯ ಅನಾರೋಗ್ಯಕ್ಕೆ ಎಂದು ತಂದ ಮಾತ್ರ ಮಗನ ಪಾಲಿಗೆ ವಿಷವಾಗಿದೆ.
- Advertisement -