- Advertisement -
- Advertisement -
ಜಾತ್ರೆಯಲ್ಲಿ ತಂದೆಯ ಕೈಯಿಂದ ಆಕಸ್ಮಿಕವಾಗಿ ಜಾರಿ ಬಿದ್ದ ಬಾಲಕಿ ರಥದ ಚಕ್ರದಡಿ ಸಿಲುಕಿ ಮೃತಪಟ್ಟ ಘಟನೆ ಕೇರಳದ ಕೊಲ್ಲಂನಲ್ಲಿ ನಡೆದಿದೆ.
ಮೃತಪಟ್ಟ ಬಾಲಕಿ ಚವರ ಮೂಲದ ರಮೇಶನ್ ಹಾಗೂ ಜೀಜಿ ದಂಪತಿಯ ಪುತ್ರಿ ಕ್ಷೇತ್ರ (5) ಎಂದು ಗುರುತಿಸಲಾಗಿದೆ.
ಕ್ಷೇತ್ರ ಅಪ್ಪ ಅಮ್ಮನೊಂದಿಗೆ ಕೊಟ್ಟಂಕುಳಂಗರ ದೇವಸ್ಥಾನದ ಜಾತ್ರೆಗೆ ಬಂದಿದ್ದಾಳೆ. ರಥ ಎಳೆಯುವ ಸಂದರ್ಭ ಜನರ ನೂಕುನುಗ್ಗಲು ಹೆಚ್ಚಾಗಿ, ಕ್ಷೇತ್ರ ಅಪ್ಪನ ಕೈಯಿಂದ ಆಕಸ್ಮಿಕವಾಗಿ ಜಾರಿ ಕೆಳಗೆ ಬಿದ್ದಿದ್ದಾಳೆ. ಬಳಿಕ ಬಾಲಕಿಯ ಮೇಲೆ ರಥದ ಚಕ್ರ ಹರಿದಿದೆ. ಪರಿಣಾಮ ಕ್ಷೇತ್ರ ಸಾವನ್ನಪ್ಪಿದ್ದಾಳೆ.
ಕ್ಷೇತ್ರಳ ಮೇಲೆ ಚಕ್ರ ಹರಿದ ಬಳಿಕ ತಕ್ಷಣ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಪ್ರಾಣ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ತಿಳಿದು ಬಂದಿದೆ. ಇನ್ನು ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
- Advertisement -