Friday, May 3, 2024
spot_imgspot_img
spot_imgspot_img

ಆನೆ ತುಳಿತಕ್ಕೆ ಮಾವುತ ಬಲಿ..!

- Advertisement -G L Acharya panikkar
- Advertisement -

ಮಾವುತನೋರ್ವ ಆನೆ ತುಳಿತದಿಂದ ಸಾವನ್ನಪ್ಪಿದ ಘಟನೆ ಕೇರಳದ ವೈಕೋಮ್​ನಲ್ಲಿ ನಡೆದಿದೆ.

ಮೃತಪಟ್ಟ ಮಾವುತ ಪುತ್ತುಪ್ಪಲ್ಲಿ ಮೂಲದ ಅರವಿಂದ್​(26) ಎಂದು ಗುರುತಿಸಲಾಗಿದೆ.

ಟಿವಿ ಪುರಂನ ಶ್ರೀರಾಮ ಸ್ವಾಮಿ ದೇವಸ್ಥಾನದಲ್ಲಿ ಬುಧವಾರ ರಾತ್ರಿ 9 ಗಂಟೆಗೆ ಆನೆ ಮಾವುತನ ಮೇಲೆ ದಾಳಿ ಮಾಡಿದೆ. ಕುಂಜುಲಕ್ಷ್ಮೀ ಎಂಬ ಆನೆಯು ಅರವಿಂದ್​ನನ್ನು ಸೊಂಡಿಲಿನಲ್ಲಿ ಬಿಸಿ ಬಳಿಕ ಕಾಲಿನಲ್ಲಿ ತುಳಿದಿದೆ.

ದೃಶ್ಯದಲ್ಲಿ ಕಂಡುಬಂದಂತೆ ಅರವಿಂದ್ ಆನೆಯ ಕಾಲಿನ ಬಳಿ ಹೋದಾಗ ದಾಳಿ ಮಾಡಿದೆ. ಸೊಂಡಿನಲ್ಲಿ ಬೀಸಿ ನೆಲಕ್ಕೆ ಬೀಳಿಸಿ ತುಳಿದಿದೆ. ಈ ವೇಳೆ ಅಲ್ಲೇ ಇದ್ದ ಮತ್ತೋರ್ವ ಮಾವುತ ಅರವಿಂದ್​ನನ್ನು ರಕ್ಷಿಸಲು ಮುಂದಾಗುತ್ತಾರೆ. ಕೂಡಲೇ ಅವರನ್ನು ನೆರೆದಿದ್ದವರು ಆಸ್ಪತ್ರೆಗೆ ಸಾಗಿಸುತ್ತಾರೆ. ಆದರೆ ಅರವಿಂದ್​ ಚಿಕಿತ್ಸೆ ಫಲಿಸದೆ​ ​ ಸಾವನ್ನಪ್ಪಿದ್ದಾರೆ.

- Advertisement -

Related news

error: Content is protected !!