- Advertisement -
- Advertisement -
ಅಧ್ಯಕ್ಷರಾಗಿ ತಿಮ್ಮಪ್ಪ ಮಂಜಪ್ಪಾಲು, ಕಾರ್ಯದರ್ಶಿಯಾಗಿ ಜಗದೀಶ ನೂಜಿ





ಧರ್ಮನಗರ-ಕಂಬಳಬೆಟ್ಟಿನ 55ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಮಹಾಸಭೆಯು ಜೂನ್ 14 ಬುಧವಾರದಂದು ಸಂಜೆ 5 ಗಂಟೆಗೆ ಸಮಾಜ ಮಂದಿರದಲ್ಲಿ ನಡೆಯಿತು. ಮುಂದಿನ ಎರಡು ವರ್ಷದ ಅವಧಿಗೆ ನೂತನ ಸಮಿತಿ ರಚನೆ ಮಾಡಲಾಯಿತು.
ನೂತನ ಸಮಿತಿಯ ಅಧ್ಯಕ್ಷರಾಗಿ ತಿಮ್ಮಪ್ಪ ಮಂಜಪ್ಪಾಲು ಆಯ್ಕೆಯಾದರು. ಉಪಾಧ್ಯಕ್ಷರಾಗಿ ಕೃಷ್ಣಪ್ಪ ಉರಿಮಜಲು ಹಾಗೂ ಲಕ್ಷ್ಮೀ ಉರಿಮಜಲು, ಕಾರ್ಯದರ್ಶಿಯಾಗಿ ಜಗದೀಶ ನೂಜಿ, ಜೊತೆ ಕಾರ್ಯದರ್ಶಿಯಾಗಿ ಮನೋರಂಜನ್ ಅಮೈ ಹಾಗೂ ಕೋಶಾಧಿಕಾರಿಯಾಗಿ ಧನರಾಜ್ ಅಮೈ ಆಯ್ಕೆಯಾದರು.
- Advertisement -








