- Advertisement -
- Advertisement -
ಚಲಿಸುತ್ತಿದ್ದ ರೈಲಿನಿಂದ ಬಿದ್ದು ಉದ್ಯಮಿಯೊಬ್ಬರು ಮೃತಪಟ್ಟ ಘಟನೆ ಕಲ್ಬುರ್ಗಿಯ ಶಹಾಬಾದ್ ಹಾಗೂ ರೆವೂರ್ ಮಾರ್ಗ ಮಧ್ಯೆ ನಡೆದಿದೆ.
ಮೃತಪಟ್ಟ ವ್ಯಕ್ತಿ ಚಿಂಚೊಳ್ಳಿ ತಾಲೂಕಿನ ಕೊಡ್ಲಿ ಗ್ರಾಮದ ನಿವಾಸಿ, ಕಲ್ಬುರ್ಗಿಯ ಟ್ರಾವೆಲ್ ಏಜೆನ್ಸಿ ಮಾಲಕ ಅಣವಿರಯ್ಯ ಪ್ಯಾಟಿ ಮನಿ ಮೃತರು.
ಅಣವಿರಯ್ಯ ಅವರು ಈ ಹಿಂದೆ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದರು. ವೇಗವಾಗಿ ಹೋಗುತ್ತಿದ್ದ ರೈಲಿನಿಂದ ಬಿದ್ದ ರಭಸಕ್ಕೆ ಅಣವಿರಯ್ಯ ಅವರ ಎಡಗೈ ಪೂರ್ತಿ ನಜ್ಜುಗಜ್ಜಾಗಿದ್ದು, ತಲೆಗೆ ಗಂಭೀರ ಗಾಯವಾದ ಕಾರಣ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ವಾಡಿ ರೈಲ್ವೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಕುರಿತು ವಾಡಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
- Advertisement -