


ಪುತ್ತೂರು : ಚಲಿಸುತ್ತಿದ್ದ ದ್ವಿಚಕ್ರ ವಾಹನದ ಮೇಲೆ ರೈಲ್ವೆ ಕ್ರಾಸಿಂಗ್ ಗೇಟ್ ತುಂಡಾಗಿ ಬಿದ್ದು ದ್ವಿಚಕ್ರ ವಾಹನ ಸವಾರರು ಪ್ರಾಣಾಪಾಯದಿಂದ ಪಾರಾದ ಘಟನೆ ಮೇ 29 ರಂದು ನರಿಮೊಗರುವಿನಲ್ಲಿ ನಡೆದಿದೆ.
ಬೆಟ್ಟಂಪಾಡಿ ನಿವಾಸಿ ಜಗನ್ನಾಥ ಎಂಬವರು ತನ್ನ ಮಗನನ್ನು ಸಾಂದೀಪನಿ ಶಾಲೆಯಲ್ಲಿ ದಾಖಲಾತಿ ಮಾಡಿಸಲು ತನ್ನ ದ್ವಿಚಕ್ರ ವಾಹನದಲ್ಲಿ ಪುರುಷರಕಟ್ಟೆ ರಸ್ತೆಯ ಮೂಲಕ ಬರುತ್ತಿದ್ದರು. ಅಪರಾಹ್ನ 2.30ರ ಸಮಯದಲ್ಲಿ ಪುರುಷರಕಟ್ಟೆ-ಪಂಜಳ ಸಂಪರ್ಕ ರಸ್ತೆಯ ಸಾಂದೀಪನಿ ಶಾಲಾ ಬಳಿಯಲ್ಲಿರುವ ರೈಲ್ವೇ ಟ್ರಾಕ್ ಕ್ರಾಸಿಂಗ್ನಲ್ಲಿ ರೈಲ್ವೆಯ ಗೇಟ್ ಹಾಕಲಾಗಿತ್ತು.ರೈಲು ತೆರಳಿದ ಬಳಿಕ ಗೇಟ್ ತೆರೆದು ವಾಹನಗಳು ತೆರಳುತ್ತಿದ್ದಾಗ ಮೇಲಕ್ಕೆ ಹೋಗಿದ್ದ ಗೇಟ್ನ ಬುಡದ ಭಾಗದಿಂದಲೇ ತುಂಡಾಗಿ ಜಗನ್ನಾಥರವರ ತಲೆ ಮೇಲೆ ಬಿದ್ದು ನಂತರ ಅವರ ಮಗನ ತಲೆ ಮೇಲೆ ಬಿದ್ದಿದೆ. ಜಗನ್ನಾಥರವರು ಹೆಲೈಟ್ ಧರಿಸಿದ್ದರಿಂದ ಜಗನ್ನಾಥ ಹಾಗೂ ಅವರ ಪುತ್ರ ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮಾನವೀಯತೆ ಮರೆತ ರೈಲ್ವೇ ಇಲಾಖೆಯವರು: ಅಪಘಾತದ ಬಗ್ಗೆ, ನರಿಮೊಗರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಸುರೇಶ್ ಪ್ರಭುರವರು ರೈಲ್ವೇ ಇಲಾಖೆಯ ಅಧಿಕಾರಿಗಳಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ತಮ್ಮ ಇಲಾಖೆಯ ವಾಹನದ ಮೂಲಕ ರೈಲ್ವೆ ಇಲಾಖೆಯ ಆಸ್ಪತ್ರೆಗೆ ದಾಖಲಿಸುವುದಾಗಿ ತಿಳಿಸಿದ್ದ ರೈಲ್ವೆ ಇಲಾಖೆಯವರು ನಂತರ ನಮ್ಮ ಆಸ್ಪತ್ರೆಯಿಲ್ಲ. ನೀವು ಹೇಳಿದ ಆಸ್ಪತ್ರೆಗೆ ಕರೆದುಕೊಂಡು ಹೋಗುವುದಾಗಿ ತಿಳಿಸಿದ್ದರು ಹೊರತು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲು ಯಾವುದೇ ಕ್ರಮಕೈಗೊಳ್ಳಲಿಲ್ಲ ಎಂದು ಗಾಯಾಳುವು ಆರೋಪಿಸಿದ್ದಾರೆ.