- Advertisement -
- Advertisement -
ಕಾಸರಗೋಡು: ನಿಂತಿದ್ದ ಲಾರಿಗೆ ಕಾರು ಢಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಮೃತಪಟ್ಟ ಘಟನೆ ಕಾಸರಗೋಡು ಹಳೆ ಬಸ್ ನಿಲ್ದಾಣದ ಬದ್ರಿಯಾ ಹೋಟೆಲ್ ಬಳಿ ನಡೆದಿದೆ.
ಮೂವರು ಗಾಯಗೊಂಡಿದ್ದು ಓರ್ವನ ಸ್ಥಿತಿ ಗಂಭೀರವಾಗಿದೆ. ಕಾಸರಗೋಡು ಚೆಂಗಳ ನಿವಾಸಿ ಶಂಸುದ್ದೀನ್ ಮತ್ತು ಸಾಜಿದಾ ದಂಪತಿಯ ಪುತ್ರ ಮುಹಮ್ಮದ್ ಸಾಹಿಲ್ (21) ಮೃತರು. ಭಾನುವಾರ ಮುಂಜಾನೆ 3 ಗಂಟೆ ಸುಮಾರಿಗೆ ಈ ಅವಘಡ ಸಂಭವಿಸಿದೆ.
ಸಾಹಿಲ್ ತನ್ನ ಸ್ನೇಹಿತರೊಂದಿಗೆ ಅಣಂಗೂರು ಕಡೆಯಿಂದ ಕಾರಿನಲ್ಲಿ ಬರುತ್ತಿದ್ದಾಗ ಅಪಘಾತ ಸಂಭವಿಸಿದೆ. ಸಾಹಿಲ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಆತನ ಜೊತೆಗಿದ್ದ ಮೂವರು ಗಾಯಗೊಂಡಿದ್ದಾರೆ. ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಲ್ಲಿ ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಡಿಗ್ರಿ ಮುಗಿಸಿದ ಸಾಹಿಲ್ ಮುಂದಿನ ವ್ಯಾಸಂಗಕ್ಕೆ ತಯಾರಿ ನಡೆಸುತ್ತಲೇ ವಿದಾಯ ಹೇಳಿದ್ದಾರೆ.
- Advertisement -