Thursday, May 16, 2024
spot_imgspot_img
spot_imgspot_img

ನಿಂತಿದ್ದ ಬೈಕ್​ಗೆ ವಾಹನ ಢಿಕ್ಕಿ; ಮೂವರು ಸಾವು..!

- Advertisement -G L Acharya panikkar
- Advertisement -

ಒಂದೇ ಬೈಕ್‌ ನಲ್ಲಿ ತೆರಳುತ್ತಿದ್ದ ಮೂವರು ಬೈಕ್​ ನಿಂತಿದ್ದ ವೇಳೆ ರಭಸದಿಂದ ಟಾಟಾ ಏಸ್ ವಾಹನ ಡಿಕ್ಕಿ ಹೊಡೆದು ಸ್ಥಳದಲ್ಲೇ ಮೂವರು ಮೃತಪಟ್ಟಿರುವ ಘಟನೆ ರಾಜಗೋಪಾಲನಗರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ.

ಮೃತಪಟ್ಟವರನ್ನು ಮಹಮ್ಮದ್ ಫಾರೂಕ್‌, ಅಬ್ರಾರ್‌ ಹಾಗೂ ಮಹಮ್ಮದ್‌ ಸಿದ್ದಿಕ್​ ಎಂದು ಗುರುತಿಸಲಾಗಿದೆ.

ರಾತ್ರಿ ಸುಮಾರು 11 ಗಂಟೆಗೆ ಈ ಘಟನೆ ನಡೆದಿದ್ದು , ಟಾಟಾ ಏಸ್‌ ಚಾಲಕ ವಾಹನವನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ. ಗುಜರಿ ಅಂಗಡಿಯಲ್ಲಿ ಕೆಲಸ ಮಾಡುತ್ತಾ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಫಾರೂಕ್‌ ಹಾಗೂ ಅಬ್ರಾರ್‌ ರಂಜಾನ್‌ ಹಬ್ಬದ ಅಂಗವಾಗಿ ಹೊಸಬಟ್ಟೆ, ಚಪ್ಪಲಿ ಖರೀದಿಗಾಗಿ ತೆರಳುತ್ತಿದ್ದರು. ಈ ವೇಳೆ ದುರ್ಘಟನೆ ಸಂಭವಿಸಿದೆ. ರಾಜಗೋಪಾಲ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!